ಶಿರಸಿ: ಇಲ್ಲಿನ ಉಪ ವಿಭಾಗದ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಲಿಂಕಲೈನ್ ಹಾಗೂ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗವಾದ ತಾರಗೋಡ್ 11 ಕೆ.ವಿ ಮಾರ್ಗದಲ್ಲಿ ಹಾಗೂ ಪಟ್ಟಣ ಶಾಖಾ ವ್ಯಾಪ್ತಿಯ ಮರಾಠಿಕೊಪ್ಪ, ಗುರುನಗರ, ಪ್ರಗತಿನಗರ, ವಿದ್ಯಾನಗರ, ಯಲ್ಲಾಪುರ ನಾಕಾ ಹಾಗೂ ಆದರ್ಶನಗರ ಪ್ರದೇಶಗಳಲ್ಲಿ ಸೆ.20 ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.