ಹಳಿಯಾಳ: ನಗರದ ರವಿವಾರದ ಮಾರ್ಕೇಟ್ ಹತ್ತಿರದಲ್ಲಿ ಹಾಗೂ ಹಿಂಬದಿಯಲ್ಲಿರುವ ರಸ್ತೆ ತ್ಯಾಜ್ಯದಿಂದ ಗಬ್ಬೇದ್ದು ನಾರುತ್ತಿದ್ದು, ಸ್ವಚ್ಚಗೊಳಿಸುವ ಕಾರ್ಯವನ್ನು ನಗರ ಸಭೆ ಮಾಡಿದೆ.
ಇಲ್ಲಿ ರಸ್ತೆಯ ಬದಿಯಲ್ಲಿ ಕೊಳೆತ ಹಣ್ಣು ಹಂಪಲುಗಳು ಹಾಗೂ ತರಕಾರಿಗಳನ್ನು ಚೆಲ್ಲಲಾಗುತ್ತಿದ್ದು, ಸ್ಥಳೀಯವಾಗಿ ಅಸ್ವಚ್ಛತೆ ನಿರ್ಮಾಣವಾಗಿದ್ದ ಬಗ್ಗೆ ವರದಿ ಪ್ರಕಟಿಸಿ ನಗರ ಸಭೆಯ ಗಮನ ಸೆಳೆಯಲಾಗಿತ್ತು. ಕೂಡಲೆ ಎಚ್ಚೆತ್ತ ನಗರ ಸಭೆ ಪೌರಕಾರ್ಮಿಕರ ಮೂಲಕ ಸ್ವಚ್ಚತೆಗೆ ಮುಂದಾಗಿ ಶ್ಲಾಘನೆಗೆ ಪಾತ್ರವಾಗಿದೆ. ಇನ್ನೂ ಇಲ್ಲಿ ಕಸ ಚೆಲ್ಲುವವರ ಮೇಲೆ ಸೂಕ್ತ ರೀತಿಯ ಕ್ರಮವನ್ನು ಕೈಗೊಂಡಲ್ಲಿ ಸದಾ ಸ್ವಚ್ಚತೆ ಕಾಪಾಡಲು ಸಾಧ್ಯ ಎನ್ನುವ ಮಾತು ಚರ್ಚೆಯಲ್ಲಿದೆ.