• Slide
    Slide
    Slide
    previous arrow
    next arrow
  • ಯಲ್ಲಾಪುರ-ಬಂಕಾಪುರ ರಸ್ತೆ ವಿಸ್ತರಿಸಿ; ಮುಖ್ಯಮಂತ್ರಿಗೆ ಮನವಿ

    300x250 AD

    ಮುಂಡಗೋಡ: ರಾಷ್ಟ್ರೀಯ ಹೆದ್ದಾರಿಗೆ ಒಳಪಡುವ ಯಲ್ಲಾಪುರ-ಬಂಕಾಪುರ ರಸ್ತೆ ವಿಸ್ತರಿಸಿ ಅಭಿವೃದ್ಧಿ ಪಡಿಸುವುದರ ಕುರಿತು ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ಮಂಜುನಾಥ ಎಚ್. ಕಲಾಲ ಅವರು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.


    ಕೈಗಾ-ಇಳಕಲ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಲ್ಲಾಪುರ-ಬಂಕಾಪುರ ರಸ್ತೆ ಅತಿ ಚಿಕ್ಕ -ಇಕ್ಕಟ್ಟಾದ ರಸ್ತೆ, ಯಲ್ಲಾಪುರದಿಂದ ಬಂಕಾಪುರ ಗಡಿಯವರೆಗೆ ಒಳಪಡುತ್ತದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟು ವಾಹನ ಸಂಚಾರ ಹೆಚ್ಚಾಗಿರುತ್ತದೆ. ಈ ರಸ್ತೆ ಜಿಲ್ಲಾ ಕೇಂದ್ರ ಕಾರವಾರದ ಸಂಪರ್ಕ ರಸ್ತೆ ಯಾಗಿದ್ದು ಹಾಗೆಯೇ ನೆರೆಯ ಗೋವಾ ರಾಜ್ಯಕ್ಕೆ ಕೂಡುವ ರಸ್ತೆಯಾಗಿರುತ್ತದೆ. ರಾತ್ರಿ ಸಮಯದಲ್ಲಿ ವಾಹನ ಸವಾರರ ಪರದಾಟ ಕೇಳತೀರದು, ಮಳೆಗಾಲದಲ್ಲಿಯೂ ಪರಿಸ್ಥಿತಿ ತೀರಾ ಗಂಭೀರವಾಗಿರುತ್ತದೆ.

    300x250 AD

    ಈ ರಸ್ತೆಯಲ್ಲಿ ಇಕ್ಕಟ್ಟಾದ ತಿರುವುಗಳಿಂದ ಕೂಡಿದ್ದು ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸಲು ಕಷ್ಟ ಸಾಧ್ಯ ಹಾಗೂ ಈ ರಸ್ತೆಯು ಏಕ ಮುಖ ಸಂಚಾರಕ್ಕೆ ಯೋಗ್ಯವಾಗಿದ್ದು ದ್ವಿಮುಖ ಸಂಚಾರಕ್ಕೆ ಅಲ್ಲ. ಕಾರಣ ಪ್ರಸ್ತುತ ರಸ್ತೆಯ ಇಕ್ಕಲಗಳ ಬಲ ಮತ್ತು ಎಡ ಭಾಗಗಳಲ್ಲಿ ಎರಡು ಅಡಿಗಳಷ್ಟು ವಿಸ್ತರಿಸಿ ಅಭಿವೃದ್ಧಿ ಪಡಿಸಿದ್ದಲ್ಲಿ ರಸ್ತೆಯಲ್ಲಿ ಸಂಚರಿಸಲು ಸುಗಮವಾಗುತ್ತದೆ. ಆದ್ದರಿಂದ ತಾವುಗಳು ಈ ಮನವಿಯನ್ನು ಪರಿಗಣಿಸಿ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top