• Slide
    Slide
    Slide
    previous arrow
    next arrow
  • ಭೈರುಂಬೆಯಲ್ಲಿ ಸೆ.12 ರಿಂದ ಶ್ರೀಕೃಷ್ಣ ಯಜುರ್ವೇದ ಪಾರಾಯಣ-ಪುರುಷ ಸೂಕ್ತ ಹವನ

    300x250 AD

    ಶಿರಸಿ: ಆಯುಷ್ಮಾನ ಭವ, ವಿಜಯೀ ಭವ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕ್ಷೇಮವನ್ನು ಸಂಕಲ್ಪಿಸಿ ತಾಲೂಕಿನ ಭೈರುಂಬೆಯ ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಆವಾರದಲ್ಲಿ ಸೆ.12 ರವಿವಾರದಿಂದ ಸೆ.18 ಶನಿವಾರದ ವರೆಗೆ ಒಂದು ವಾರಗಳ ಕಾಲ ವೇದ ಮಾತೆಯ ಆರಾಧನೆ ನಡೆಯಲಿದೆ.


    ಈ ಅಂಗವಾಗಿ ಶ್ರೀಕೃಷ್ಣ ಯಜುರ್ವೇದ ಪಾರಾಯಣ, ಪುರುಷ ಸೂಕ್ತ ಹವನ ನಡೆಯಲಿದೆ. ರವಿವಾರ ಬೆಳಿಗ್ಗೆ 7.30ಕ್ಕೆ ದೇವತಾ ಪ್ರಾರ್ಥನೆ, ಪೂರ್ವಾಂಗ ಕಾರ್ಯಕ್ರಮಗಳು ಹಾಗೂ ನಂತರ ಕೃಷ್ಣ ಯಜುರ್ವೇದ ಪಾರಾಯಣೆ ಪ್ರಾರಂಭವಾಗಲಿದೆ.

    300x250 AD


    ಕೃಷ್ಣ ಯಜುರ್ವೇದ ಪಾರಾಯಣೆಯು ಶನಿವಾರದ ವರೆಗೆ ಮುಂದುವರಿಯಲಿದೆ. ಶನಿವಾರ ಬೆಳಿಗ್ಗೆ 9 ರಿಂದ ಪುರುಷ ಸೂಕ್ತ ಹವನ ಪ್ರಾರಂಭವಾಗಲಿದೆ. ಮಧ್ಯಾಹ್ನ ಪೂರ್ಣಾಹುತಿ, ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3.30 ರಿಂದ ಮಂಗಲ ಸಭೆ, ವೈದಿಕ ಮಂತ್ರಾಕ್ಷತೆ, ವಿಪ್ರಾಶೀರ್ವಾದ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 7975941805, 9611738442 ಸಂಪರ್ಕಿಸಬಹುದೆಂದು ಸಂಘಟನೆಯ ಪ್ರಮುಖ ಮಂಜುನಾಥ ಭಟ್ಟ ಭಟ್ರಕೇರಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top