ಶಿರಸಿ: ತಾಲೂಕಿನ ಒಕ್ಕಲಕೊಪ್ಪ ಗ್ರಾಮದ 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಾಂಕೇತಿಕವಾಗಿ ವಿಜೃಂಭಣೆಯಿಂದ ಶ್ರೀ ಜಗದೀಶ್ವರ ದೇವಸ್ಥಾನದಲ್ಲಿ ಆಚರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲಿ ಪಂಚಮಿಯ ದಿನ ಮಾತೃಮಂಡಳಿಯ ವತಿಯಿಂದ ಶ್ರೀ ಮಹಾಗಣಪತಿ ಮತ್ತು ಶ್ರೀ ಜಗದೀಶ್ವರ ದೇವರ ಸನ್ನಿಧಿಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೇರವೆರಿಸಲಾಯಿತು. ಪ್ರತಿವರ್ಷದಂತೆ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳ ಜೊತೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಂಪನ್ನವಾಯಿತು.