ಯಲ್ಲಾಪುರ: ಕಿರವತ್ತಿ- ಸರಳ ಸಜ್ಜನಿಕೆಯ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಿರವತ್ತಿ ಹಾಗೂ ಮದ್ನೂರ ಭಾಗದ ಕಾರ್ಯಕರ್ತರನ್ನು ಪ್ರವಾಸದ ಮಾರ್ಗ ಮಧ್ಯೆ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಇದೇ ವೇಳೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತನ ಹೋಟೆಲಿಗೆ ಭೇಟಿ ನೀಡಿ ಸರಳತೆ ಮೆರೆದರು. ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣ ರಾಜ್ಯ ಹಿತರಕ್ಷಣಾ ಪ್ರಾಂತ ರಕ್ಷಕ ದೊಂಡು ಪಾಟೀಲ, ಭಾಜಪ ತಾಲೂಕ ಮಾಧ್ಯಮ ಸಹ ವಕ್ತಾರ ಸುನೀಲ್ ಕಾಂಬಳೆ, ಯುವ ಮೊರ್ಚಾ ಮಂಡಳ ಕಾರ್ಯದರ್ಶಿ ಪ್ರಭು ಚಿಚಕಂಡಿ, ಯುವ ಮೊರ್ಚಾ ತಾಲೂಕ ಕಾರ್ಯದರ್ಶಿ ವಿಠ್ಠಲ ಶೆಳಕೆ, ಗ್ರಾಮ ಪಂಚಾಯತ ಸದಸ್ಯ ಲಕ್ಷ್ಮಣ ತೋರತ್, ಪ್ರಮುಖರಾದ ರಜತ ಖಾನಾಪೂರ, ವಿನೋದ ಖಾನಾಪುರ, ಬಾಬು ಶೆಂಡಗೆ, ಸಾವು ಪಾಂಡ್ರಮೀಸೆ, ಸುಭಾಸ ಶೇಶಗೇರಿ, ಚಿಚ್ಚು ಎಡಗೆ, ಸುರೇಶ್ ಜಾಧವ, ಅರ್ಜುನ್ ಬೆಂಡಗೇರಿ, ಬಾಬು ಪಾಂಡ್ರಮೀಸೆ, ದೂಳು ಶೆಂಡಗೆ, ಕಾರ್ತಿಕ ನಾಯ್ಕ, ರೋಹನ್ ಖಾನಾಪೂರ, ವಿನಾಯಕ ಕಳಸುರಕರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.