ಅಂಕೋಲಾ: ತಾಲೂಕಿನ ಬಾಳೆಗುಳಿ ಬಳಿಯ ಯುವತಿಯೋರ್ವಳು ಕೃಷಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಯುವತಿ ಅಕ್ಷತಾ ತಮ್ಮಾಣಿ ಗೌಡ ಎಂದು ತಿಳಿದುಬಂದಿದೆ. ಈಕೆ ಮೂಲತಃ ಅಗಸೂರಿನವಳಾಗಿದ್ದು ಬಾಳೆಗುಳಿಯ ಅಜ್ಜಿಯ ಮನೆಯಲ್ಲಿ ಇರುತ್ತಿದ್ದಳು ಎನ್ನಲಾಗಿದೆ.
ಅಣ್ಣನ ಜೊತೆ ಗದ್ದೆ ಕೆಲಸಕ್ಕೆ ಹೋಗಿದ್ದಳು. ಈ ವೇಳೆ ಬಾವಿ ನೀರು ತೆಗೆಯಲು ಹೋದ ಸಂದರ್ಭದಲ್ಲಿ ಆಯತಪ್ಪಿ ಬಾವಿಯಲ್ಲಿ ಬಿದ್ದಿದ್ದಾಳೆ. ಮನೆಗೆ ಹೋದ ಅಣ್ಣ ಸಮಯ ಕಳೆದರೂ ತಂಗಿ ಬಾರದಿರುವುದನ್ನು ಕಂಡು ಮತ್ತೆ ಗದ್ದೆ ಹೋಗಿ ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಅಂಕೋಲಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.