ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ವೈದ್ಯ ಮಂಕಿಯ ಡಾ.ವಿಶ್ವನಾಥ್ ಶೆಟ್ಟಿ (68)ಅವರು ಇಂದು ಬೆಳಗ್ಗೆ 7.45 ಕ್ಕೇ ನಿಧನರಾದರೆಂದು ತಿಳಿಸಲು ವಿಷಾದವೆನಿಸುತ್ತದೆ. ಅವರ ಅಂತಿಮ ಕ್ರಿಯೆಯು ಅವರ ಸ್ವಗ್ರಹ ಉಡುಪಿಯ ‘ಶಿರ್ವ ಕೊಡು ಮನೆ’ಯಲ್ಲಿ ನಡೆಸಲಾಗುತ್ತದೆ.
ಜಿಲ್ಲೆಯ ಸುಪ್ರಸಿದ್ಧ ವೈದ್ಯರು, ಅವರು ಏಎಫ್ಐ ಹೊನ್ನಾವರದ ಮಾಜಿ ಅಧ್ಯಕ್ಷರು ಹಾಗೂ ಸಕ್ರಿಯ ಸದಸ್ಯರಾಗಿದ್ದರು.ಅವರ ಸಾವು ತುಂಬಲಾರದ ನಷ್ಟ ಉಂಟುಮಾಡಿದೆ. ಉತ್ತರ ಕನ್ನಡ ಜಿಲ್ಲಾ AFI ತೀವ್ರ ಸಂತಾಪ ಸೂಚಿಸಿದೆ.