• Slide
    Slide
    Slide
    previous arrow
    next arrow
  • ಟಿಎಸ್ಎಸ್ ಪುಟಾಣಿ ಕೃಷ್ಣ ಪ್ರದರ್ಶನ ಹಾಗೂ ಸಿಹಿ ಉತ್ಸವ ಉದ್ಘಾಟನೆ

    300x250 AD

    ಶಿರಸಿ: ತಾಲೂಕಿನ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಆವಾರದಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ಆಯೋಜಿಸಿರುವ “ಪುಟಾಣಿ ಕೃಷ್ಣ ಪ್ರದರ್ಶನ ಹಾಗೂ ಸಿಹಿ ಉತ್ಸವ” ವನ್ನು ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಕೃಷ್ಣ ವೇಷಧಾರಿ ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಮೂಲಕ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಸಂಘದ ಸಿಬ್ಬಂದಿಗಳು, ಪುಟಾಣಿ ಮಕ್ಕಳು, ಪೋಷಕರು, ಸದಸ್ಯರು ಉಪಸ್ಥಿತರಿದ್ದರು.

    300x250 AD

    ಈ ಕಾರ್ಯಕ್ರಮ ಅಗಸ್ಟ್ 28 ರಿಂದ ಸಪ್ಟೆಂಬರ್ 01 ರ ವರೆಗೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆಲ್ಲರಿಗೂ ಉಡುಗೊರೆ, ಪ್ರಮಾಣ ಪತ್ರ ಸಿಗಲಿದೆ ಹಾಗೂ ಪಾಲಕರಿಗೆ ಸುಪರ್ ಮಾರ್ಕೆಟ್‍ನ ವಿಶೇಷ ರಿಯಾಯತಿ ಕೂಪನ್ ದೊರೆಯಲಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ವಿಶೇಷ ಸಿಹಿ ಖಾದ್ಯಗಳ ಮಾರಾಟ ಆಯೋಜಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top