ಶಿರಸಿ: ದೇಶ ಕಂಡ ಮುತ್ಸದ್ದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಮಾಜಿ ಕೇಂದ್ರ ವಾಣಿಜ್ಯ ಸಚಿವರೂ ಆಗಿದ್ದ ದಿ.ರಾಮಕೃಷ್ಣ ಹೆಗಡೆಯವರ ಜನ್ಮ ದಿನದ ನಿಮಿತ್ತದ ಆ.29 ರಂದು ಬೆಳಿಗ್ಗೆ 9 ಗಂಟೆಗೆ ಅವರ ಸ್ಮರಣೆಯ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಕ್ಲಬ್ ಹೌಸ್’ನ ಚಿಂತನ- ಮಂಥನ ಅರ್ಪಿಸುವ ಈ ಕಾರ್ಯಕ್ರಮದಲ್ಲಿ ‘ಜನಮಾನಸದಲ್ಲಿ ಮೌಲ್ಯಾಧಾರಿತ ಮುತ್ಸದ್ದಿ ರಾಮಕೃಷ್ಣ ಹೆಗಡೆ’ ಇವರ ಬಗ್ಗೆ ಮಾಜಿ ಸಚಿವರು ಮತ್ತು ಹೆಗಡೆಯವರ ಒಡನಾಡಿಗಳಾದ ಪಿ.ಜಿ.ಆರ್ ಸಿಂಧ್ಯಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಯಲ್ಲಾಪುರ, ಇತಿಹಾಸಕಾ, ವಾಗ್ಮಿ ಲಕ್ಷ್ಮೀಶ್ ಹೆಗಡೆ ಸೋಂದಾ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಭಾಗವಹಿಸುವವರು https://www.clubhouse.com/join/40enWS5A/QGNW8wVe/xeLrbBO7 ಈ ಲಿಂಕ್ ಬಳಸಿ ಸೇರಬಹುದು ಎಂದು ತಿಳಿಸಿದ್ದಾರೆ.