• Slide
    Slide
    Slide
    previous arrow
    next arrow
  • ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ; 6 ಜನರ ಬಂಧನ

    300x250 AD

    ಸಿದ್ದಾಪುರ: ಮನೆ ಸಮೀಪ ಅರಣ್ಯದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಇಟಗಿ ಸಮೀಪದ ಹರಗಿಯಲ್ಲಿ ಗುರುವಾರ ನಡೆದಿದೆ.

    300x250 AD


    ಹರಗಿಯ ಮಂಜುನಾಥ ಗಣಪತಿ ಗೌಡ ಎಂಬವರ ಮನೆ ಹತ್ತಿರದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡುತ್ತಿದ್ದ ವೇಳೆ ಠಾಣೆಯ ಪಿಎಸೈ ಮಹಾಂತಪ್ಪ ಜಿ ಕುಂಬಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆಟದಲ್ಲಿ ನಿರತರಾದ ಮಂಜುನಾಥ ಗೌಡ, ಅಣ್ಣಪ್ಪ ಗೌಡ, ಗಣಪತಿ ಗೌಡ, ನಾರಾಯಣ ಗೌಡ, ನಾಗರಾಜ ಮಡಿವಾಳ, ವೆಂಕಟೇಶ ಗೌಡ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಟಕ್ಕೆ ಬಳಸಿದ್ದ 2500 ನಗದು ಮತ್ತು ಇನ್ನಿತರ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top