• Slide
    Slide
    Slide
    previous arrow
    next arrow
  • ಸ್ವಾಮೀಜಿಗಳ ನಡುವೆ ವಿದುರನಾಗಿ‌ ‘ಕೆರೇಕೈ’

    300x250 AD

    ಶಿರಸಿ: ಇಬ್ಬರು‌ ಸ್ವಾಮೀಜಿಗಳ‌ ನಡುವೆ ಇಲ್ಲಿನ ವಿದ್ವಾಂಸ ಉಮಾಕಾಂತ ಭಟ್ಟ ‌ಕೆರೇಕೈ ಅವರು ವಿದುರನಾಗಿ‌ ಕಾಣಿಸಿಕೊಳ್ಳುವ ಅಪರೂಪದ ಪ್ರಸಂಗಕ್ಕೆ ಆ.30 ಸಾಕ್ಷಿಯಾಗಲಿದೆ.


    ಉಡುಪಿ ಅಷ್ಟ‌ಮಠಗಳಲ್ಲಿ‌ ಒಂದಾದ ಪೇಜಾವರ‌ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ‌ 34ನೇ ಚಾತುರ್ಮಾಸ್ಯದ‌ ಅಂಗವಾಗಿ ಅಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಧ್ಯಾಹ್ನ3:30ರಿಂದ ತಾಳ ಮದ್ದಲೆ ನಡೆಯಲಿದೆ.

    300x250 AD

    ವಿದುರಾಥಿತ್ಯ ತಾಳ ಮದ್ದಲೆ‌ ಇದಾಗಿದ್ದು, ಈ ಪ್ರಸಂಗದಲ್ಲಿ ಧರ್ಮರಾಜನಾಗಿ ಭಂಡಾರಕೇರಿ‌ಮಠದ ಪೀಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕೃಷ್ಣನಾಗಿ ಪೇಜಾವರ‌ಮಠದ ವಿಶ್ವಪ್ರಸನ್ನ ತೀರ್ಥರು ಪಾತ್ರ ‌ಕಟ್ಟಿಕೊಡಲಿದ್ದಾರೆ. ಇವರ ನಡುವೆ ವಿದುರನಾಗಿ ಶಿರಸಿ ಯ ವಿ.ಉಮಾಕಾಂತ‌ ಭಟ್ಟ ಕೆರೇಕೈ ಹಾಗೂ ದ್ರೌಪದಿಯಾಗಿ ವಿ. ಎ.ಹರಿದಾಸ ಭಟ್ಟ ಬೆಂಗಳೂರು ಪಾಲ್ಗೊಳ್ಳಿದ್ದಾರೆ.

    ಹಿಮ್ಮೇಳದಲ್ಲಿ ಅರ್ಜುನ ಕೋರ್ಡೆಲ್ ಬಳಗ ಸಹಕಾರ‌ ಕೊಡಲಿದೆ. ವಿಶ್ವೇಶವಾಣಿ ಫೇಸ್ ಬುಕ್, ಯೂಟ್ಯೂಬ್ ಗಳಲ್ಲಿ ಇದು ನೇರ ಪ್ರಸಾರವಾಗಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top