• Slide
    Slide
    Slide
    previous arrow
    next arrow
  • ಇಂಜಿನೀಯರ್ ಉದ್ಯೋಗಸ್ಥ ನೇಣಿಗೆ ಶರಣು

    300x250 AD

    ಅಂಕೋಲಾ: ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೆಂಕಣಕೇರಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.


    ಗೌತಮ ಪ್ರಭಾಕರ ನಾಯ್ಕ (24) ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿ ಯಾರು ಇರದ ವೇಳೆ ಅದಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕೋವಿಡ್ ಲಾಕೌನ್ ಕಾರಣ ಮನೆಯಿಂದಲೇ ಕಂಪನಿ ಕೆಲಸ (ವರ್ಕ್ ಪ್ರಾಂ ಹೋಂ) ಮಾಡುತ್ತಿದ್ದು, ಸಾವಿಗೆ ಶರಣಾಗುವ ಪೂರ್ವವೂ ಕೆಲ ಹೊತ್ತು ಕಾರ್ಯ ನಿರ್ವಹಿಸಿದಂತಿದೆ ಎನ್ನುವುದು ಕೆಲ ಸ್ಥಳೀಯರ ಅಭಿಪ್ರಾಯವಾಗಿದೆ. ಮೃತ ಗೌತಮ ಶಾಂತ ಸ್ವಭಾವದ ಯುವಕನಾಗಿದ್ದ.

    300x250 AD


    ಮೃತನ ತಾಯಿ ಶಿಕ್ಷಣ ಇಲಾಖೆಯಲ್ಲಿ ಸಿ. ಆರ್. ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದು ಈ ಹಿಂದಿನ ಕಹಿ ಘಟನೆ ಮರೆತು, ಪತಿಯ ಸಾವಿನ ದುಃಖ ಮರೆಯುವ ಮುನ್ನವೇ,ಮುದ್ದಿನ ಮಗನನ್ನು ಕಳೆದುಕೊಂಡು ರೋದಿಸುವಂತಾಗಿರುವುದು ವಿಪರ್ಯಾಸವೇ ಸರಿ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಅಂಕೋಲಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top