ಶಿರಸಿ: ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯ ವೆಂಕಟೇಶನಾಗೇಶ ಶೇಟ್ ಮತ್ತು ಧೋರಣಗಿರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರುಗಳಾದ ಜಯರಾಮ ತಿಮ್ಮಣ್ಣ ಭಟ್ ಹಾಗೂ ಗಣಪತಿ ತಿಮ್ಮಯ್ಯ ಹೆಗಡೆ ಇವರುಗಳು ಸ್ವಾಭಾವಿಕ ಮರಣ ಹೊಂದಿದ್ದು, ಇವರುಗಳ ವಾರಸುದಾರರಾದ ರಾಜೇಶ ವೆಂಕಟೇಶ ಶೇಟ್, ಮಂಜುನಾಥ ಜಯರಾಮ ಭಟ್ ಹಾಗೂ ಸುಧಾಕರ ಗಣಪತಿ ಹೆಗಡೆ ಇವರುಗಳಿಗೆ ಧಾರವಾಡ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಇವರು ತಲಾ ರೂ.10,000 ಗಳ ಮೊತ್ತದ ಚೆಕ್’ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ನೀಡಲ್ಪಡುವ ಸೌಲಭ್ಯಗಳನ್ನು ಎಲ್ಲ ಹಾಲು ಉತ್ಪಾದಕರುಪಡೆಯುವಂತಾಗಬೇಕು. ಆದ್ದರಿಂದ ಪ್ರತೀಯೊಬ್ಬ ಹಾಲು ಉತ್ಪಾದಕನೂ ಸಹ ಕಲ್ಯಾಣ ಸಂಘಕ್ಕೆ ತಪ್ಪದೇ ಸದಸ್ಯರಾಗುವಂತೆ ಅವರು ಮನವಿ ಮಾಡಿಕೊಂಡರು. ಕೇವಲ ರೂ. 100ಗಳನ್ನು ಪಾವತಿಸಿ ಆ ಜೀವ ಸದಸ್ಯರಾಗುವ ಮೂಲಕ ಒಕ್ಕೂಟದಿಂದ ಹಾಗೂ ಕಲ್ಯಾಣ ಸಂಘದಿಂದ ನೀಡಲಾಗುವ ಸೌಲಭ್ಯಗಳನ್ನು ಹಾಲು ಉತ್ಪಾದಕ ರೈತಪಡೆಯಬಹುದಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಕಲ್ಯಾಣ ಸಂಘದಿಂದ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳನ್ನು ಅತೀ ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಜಿಲ್ಲೆಯ ಎಲ್ಲ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ, ಧೋರಣಗಿರಿ ಹಾಲು ಉತ್ಪಾದಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಹೆಗಡೆ, ಮತ್ತು ಜಿಲ್ಲಾ ಮುಖ್ಯಸ್ಥ ಎಸ್ ಎಸ್ ಬಿಜೂರ್, ಮಾರುಕಟ್ಟೆ ಅಧಿಕಾರಿ ಬಸವರಾಜ ಸಲೋನಿ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ದಯಾನಂದ ಬೋರ್ಕರ್ ಇವರು ಉಪಸ್ಥಿತರಿದ್ದರು.