ಸಿದ್ದಾಪುರ: ತಾಲೂಕಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಓಸಿ ಜೂಜಾಡುತ್ತಿದ್ದ ಸಂದರ್ಭದಲ್ಲಿ ಪೋಲೀಸರು ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ ಘಟನೆ ನಡೆದಿದೆ.
ತಾಲೂಕಿನ ಕಾನಡಗೋಡ ವ್ಯಾಪ್ತಿಯ ವಡ್ಡಿಗೇರಿಯ ಬಳಿ ಬುಧವಾರ ಘಟನೆ ನಡೆದಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿದ್ದಾಪುರ ಠಾಣೆಯ ಎ ಎಸ್ಸೈ ಗಣಪತಿ ಶೇರುಗಾರ್ ಮತ್ತು ಸಿಬ್ಬಂದಿಗಳು ಜೂಜುಕೋರರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರಿಂದ 1,500 ನಗದು ಹಾಗೂ ಜೂಜಿಗೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.