ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಗ್ರೆನೈಟ್ ಹಾಗೂ ಕಡಪ ತುಂಬಿದ ಲಾರಿಯೊಂದು ತಾಲೂಕಿನ ಗೇರುಸೊಪ್ಪಾ ಸುಳೆಮಕ್ಕಿ ಕ್ರಾಸ್ ತಿರುವಿನಲ್ಲಿ ಪಲ್ಟಿಯಾಗಿದ್ದು, ಚಾಲಕ, ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಆಂಧ್ರಪ್ರದೇಶದಿಂದ ಉಡುಪಿಗೆ ಹೋಗುತ್ತಿರುವಾಗ ಗೇರುಸೊಪ್ಪಾ ಬಳಿ ರಸ್ತೆಯ ಪಕ್ಕದ ಹೊಂಡದಲ್ಲಿ ಬಿದ್ದಿತ್ತು. ವಾಹನ ಚಾಲಕ ವಾಹನದಲ್ಲಿ ಸಿಲುಕಿದ್ದರೆ, ಇನ್ನೋರ್ವನ ಮೇಲೆ ಗ್ರೇನೈಟ್ ಬಿದ್ದಿತ್ತು.
ಮಾಹಿತಿ ದೊರತ ತಕ್ಷಣ ಕಾರ್ಯಪ್ರವೃತ್ತ 112 ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಈರ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಈರ್ವರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೊನ್ನಾವರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.