ಅಂಕೋಲಾ: ಇಲ್ಲಿಯ ಪೋಲಿಸ್ ಠಾಣಾ ಸಿಬ್ಬಂದಿಯೊಬ್ಬರಿಗೆ ಹಲವು ದಿನಗಳ ಹಿಂದೆ ಕೊವಿಡ್ -19 ದೃಢಗೊಂಡ ಕಾರಣ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿತ್ತು.
ಸೋಮವಾರ ಅವರು ಸಂಪೂರ್ಣ ಗುಣಮುಖರಾಗಿ ಠಾಣೆಗೆ ಹಿಂತಿರುಗಿದ್ದರ ಹಿನ್ನಲೆಯಲ್ಲಿ ಅವರನ್ನು ಅಂಕೋಲಾ ಪೋಲಿಸ್ ಠಾಣಾ ಸಿಬ್ಬಂದಿಗಳು ಹೂಗುಚ್ಛ ನೀಡಿ, ಶಾಲನ್ನು ಹೊದೆಸಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಸಿಪಿಐ ಕೃಷ್ಣಾನಂದ, ಪಿಎಸ್ಐ ಸಂಪತ್ ಕುಮಾರ್ ಸೇರಿದಂತೆ ಠಾಣೆಯ ಇನ್ನಿತರ ಸಿಬ್ಬಂದಿಗಳು ಇದ್ದರು.