ಶಿರಸಿ: ತಾಲೂಕಿನ ಮುಂಡಗನಮನೆ ಸೊಸೈಟಿಯಲ್ಲಿ ಆ.16 ಸೋಮವಾರ ಆಧಾರ್ ಕ್ಯಾಂಪ್ ಯಶಸ್ವಿಯಾಗಿ ನಡೆಯಿತು.
ಸಾಕಷ್ಟು ಜನರು ಆಧಾರ್ಕಾರ್ಡ ಸರಿಪಡಿಸಿಕೊಳ್ಳಲು ಶಿರಸಿ ನಗರಕ್ಕೆ ಹೋಗಿ ಕಾಯ್ದು ಬೇಸತ್ತ ಜನರು ಹಳ್ಳಿಯಲ್ಲೇ ಕ್ಯಾಂಪ್ ನಡೆಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಅಂಚೆ ಇಲಾಖೆ ಸುಪರಿಂಟೆಂಡೆಂಟ್ ಶಂಕರ್, ಶಿರಸಿ ಡಿವಿಸನ್ ಸಿಸ್ಟಮ್ ಅಡ್ಮಿನ್ ಆರ್.ಜಿ.ಹೆಗಡೆ ಹಾಗೂ ಇಲ್ಲಿಗೆ ಆಗಮಿಸಿ ಸಹಕರಿಸಿದ ಆಧಾರ್ ಆಪರೇಟರ್ ಗಜೇಂದ್ರ ರವರಿಗೆ ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಕೃತಜ್ಞತೆ ತಿಳಿಸಿದರು.