ಶಿರಸಿ: ನಮಗೆ ಯಾವುದು ಮನಸ್ಸಿಗೆ ಒಳ್ಳೆಯ ಹಿತವನ್ನು ಕೊಡುತ್ತದೆಯೋ ಅದೇ ಸಾಹಿತ್ಯ ಎಂದು ಸಾಹಿತಿ ಎಸ್.ಆರ್.ಎನ್. ಮೂರ್ತಿ ನುಡಿದರು.
ನಗರದ ರೈತ ಭವನದಲ್ಲಿ ಸಾಹಿತ್ಯ ಸಿಂಚನ ಬಳಗದ ವತಿಯಿಂದ ನಡೆದ ಕವಿಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿರಸಿ ತನ್ನ ಗರ್ಭದಲ್ಲಿ ಸಾಕಷ್ಟು ವಿಶಿಷ್ಟತೆಯನ್ನು ಹೊಂದಿದೆ. ಅನೇಕ ಹಿರಿಕಿರಿಯ ಕವಿಗಳು ಶಿರಸಿಯಲ್ಲಿದ್ದಾರೆ. ಅವರೆಲ್ಲರನ್ನೂ ಪ್ರೋತ್ಸಾಹಿಸುವ ಕೆಲಸವಾಗಬೇಕು. ಸಾಹಿತಿಗಳು ಗುಣಾತ್ಮಕವಾಗಿ ಬೆಳೆಯುವಂತಾಗಬೇಕು.ನಮ್ಮ ನಾಡಿನ ಮೂಲ ಸಾಹಿತ್ಯವಾದ ರಾಮಾಯಣ ಮಹಾಭಾರತಗಳನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಬೇಕಿದೆ. ಮೂಲ ನೆಲೆಗಟ್ಟಿನಲ್ಲಿರುವ ಸಾಹಿತ್ಯವನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಿಂಚನ ಸಾಹಿತ್ಯ ಬಳಗದ ಸದಸ್ಯರು, ತಾಲೂಕಿನ ವಿವಿಧ ಸಾಹಿತಿಗಳು, ಕವಿಗಳು ಉಪಸ್ಥಿತರಿದ್ದರು.
ಅನೇಕ ಯುವ ಕವಿಗಳು ಕಾರ್ಯಕ್ರಮದಲ್ಲಿ ಕವನ ವಾಚಿಸಿದರು