ಯಲ್ಲಾಪುರ: ನಾಗರ ಪಂಚಮಿ ಪ್ರಯುಕ್ತ ಯಲ್ಲಾಪುರ ಬಸ್ ನಿಲ್ದಾಣದ ಬಳಿ ಇರುವ ನಾಗರ ಮೂರ್ತಿಗೆ ದೇವಿ ಮೈದಾನದ ನಾಗದೇವತೆಗೆ ತಾಲೂಕಾ ಪಂಚಾಯತದ ವಸತಿಗ್ರಹದ ಹತ್ತಿರ ಇರುವ ನಾಗಚೌಡೇಶ್ವರಿಗೆ ಬೆಳಗಿನಿಂದಲೇ ಹೆಂಗಳೆಯರು ನಾಗನಿಗೆ ಹಾಲೆರೆದು ಪೂಜಿಸಿದರೆ ಅರ್ಚಕರು ವಿಶೇಷ ಅಲಂಕಾರ ಮಾಡಿ ಪೂಜಿಸಿ ಎಲ್ಲರಿಗೂ ಶುಭವಾಗಲೆಂದು ಪ್ರಾರ್ಥಿಸಿದರು. ಬಹುತೇಕ ಎಲ್ಲರೂ ಕರೋನಾ ನಿಯಮ ಪಾಲಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.