• Slide
    Slide
    Slide
    previous arrow
    next arrow
  • ಕಾಲುಜಾರಿ ಬಿದ್ದು ನದಿಪಾಲಾದ ಯುವಕ

    300x250 AD

    ಭಟ್ಕಳ: ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನದಿಯಂಚಿಗೆ ತೆರಳಿದ ಯುವಕ ಕಾಲು ಜಾರಿ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನಲ್ಲಿ ನಡೆದಿದೆ.

    ಜಾಲಿ ಪಟ್ಟಣಪಂಚಾಯ ವ್ಯಾಪ್ತಿಯ ಜಾಗಟೆಬೈಲ್‌ನ ವೆಂಕಟಪುರ ನದಿಯಲ್ಲಿ ಘಟನೆ ನಡೆದಿದ್ದು ಜಯಂತ ರಾಮಗೊಂಡ(19) ಮೃತ ದುರ್ದೈವಿ.

    300x250 AD

    ಈತ ಎಂದಿನಂತೆ ಗದ್ದೆಕೆಲಸ ಮುಗಿಸಿ ಕಾಲುತೊಳೆಯಲು ಹೋದಾಗ ದುರ್ಘಟನೆ ಜರುಗಿದೆ. ಸ್ಥಳೀಯ ಯುವಕರು ಹರಸಾಹಸ ಪಟ್ಟು ಶವವನ್ನು ಮೇಲೆತ್ತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿ ಪೋಲಿಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top