Slide
Slide
Slide
previous arrow
next arrow

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ: ಸಿಎಂ ಬೊಮ್ಮಾಯಿ

300x250 AD

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವುದಾಗಿ ಘೋಷಿಸಿದ್ದರು. ಈ ಸಂಬಂಧ ಈಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಆದೇಶದನ್ವಯ ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2500 ರೂ, ವಿದ್ಯಾರ್ಥಿನಿಯರಿಗೆ 3000 ರೂ. ಗಳನ್ನು ಸರ್ಕಾರ ನೀಡಲಿದೆ. ಹಾಗೆಯೇ ಬಿಎ, ಬಿಎಸ್ಸಿ, ಬಿ.ಕಾಂ. ವಿದ್ಯಾರ್ಥಿ‌ಗಳಿಗೆ 5000 ರೂ. ಮತ್ತು ವಿದ್ಯಾರ್ಥಿನಿಯರಿಗೆ 5500 ರೂ. ನೀಡಲು ನಿರ್ಧರಿಸಲಾಗಿದೆ.

ಎಲ್‌ಎಲ್‌ಬಿ, ಪಾರಾಮೆಡಿಕಲ್, ಬಿ ಫಾರ್ಮಾ, ನರ್ಸಿಂಗ್ ವಿದ್ಯಾರ್ಥಿಗಳಿಗೆ 7500 ರೂ, ವಿದ್ಯಾರ್ಥಿನಿಯರಿಗೆ 8000 ರೂ‌. ವಿದ್ಯಾರ್ಥಿ ವೇತನ ನಿಗದು ಮಾಡಲಾಗಿದೆ. ಎಂಬಿಬಿಎಸ್, ಬಿಇ, ಬಿಟೆಕ್, ಪಿಜಿ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ನೀಡುವುದಾಗಿ ಸರ್ಕಾರ ಆದೇಶ‌ದಲ್ಲಿ ಹೇಳಿದೆ.

300x250 AD

ಕೃಷಿ ಜಮೀನು ಹೊಂದಿರುವ ರೈತರ ಮಕ್ಕಳಿಗೆ ಈ ಶಿಷ್ಯ ವೇತನ ನೀಡುವುದಾಗಿ ಸರ್ಕಾರ ಹೇಳಿದೆ. ಅವರ ಈ ಆದೇಶ ರೈತರ ಕುಟುಂಬಗಳಲ್ಲಿ ಸಂತಸ ಮೂಡಿಸಿದೆ.

ಕೃಪೆ: ನ್ಯೂಸ್13

Share This
300x250 AD
300x250 AD
300x250 AD
Back to top