• Slide
    Slide
    Slide
    previous arrow
    next arrow
  • ಜೀವಜಲ ಕಾರ್ಯಪಡೆಯಿಂದ ನೆರೆಪೀಡಿತರಿಗೆ ಸಹಾಯ

    300x250 AD

    ಶಿರಸಿ: ಜೀವಜಲ ಕಾರ್ಯಪಡೆ ಶಿರಸಿ ವತಿಯಿಂದ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಹಾಯ ಒದಗಿಸಲಾಗಿದೆ.

    ಕಾರ್ಯಪಡೆ ವತಿಯಿಂದ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಳೆದುಕೊಂಡಿರುವ ಗೋಳಿ ಸಮೀಪದ ಬಾವಿಕೈ, ಕೂಡ್ಮನೆ ಹಾಗೂ ನಾಡ್ಗುಳಿ‌ ಗ್ರಾಮಗಳ ರಸ್ತೆಯನ್ನು ಜೆಸಿಬಿ, ಹಿಟಾಚಿಗಳನ್ನು ಬಳಸಿ ಖುಲ್ಲಾಪಡಿಸಿಕೊಡಲಾಯಿತು.

    ಹಾಗೂ ಮನೆಕಳೆದುಕೊಂಡಿರುವ ಸತ್ಯನಾರಾಯಣ ಗಣಪ ಗೌಡ ಎನ್ನುವವರಿಗೆ ಮನೆಕಟ್ಟಲು ಅಗತ್ಯವಿರುವ ಜಿಂಕ್‌ಶೀಟ್ ಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿ ಸಾಂತ್ವನ ಹೇಳಲಾಯಿತು.

    300x250 AD

    ಹಲಸಗಿ ಗ್ರಾಮದ‌ ರಾಮಚಂದ್ರ ಭಟ್ ಅವರ ಮನೆಯಲ್ಲಿ ಧರೆ‌ ಕುಸಿತದಿಂದಾಗಿ ಆದ ಹಾನಿಯನ್ನಿ ಪರಿಶೀಲಿಸಿ ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಯಿತು.

    ಈ ಸಂದರ್ಭದಲ್ಲಿ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ವಿ.ಪಿ.ಹೆಗಡೆ ವೈಶಾಲಿ, ಎಂ.ಎಂ.ಭಟ್, ಅನಿಲ್ ನಾಯ್ಕ್, ಶ್ರೀಕಾಂತ ಭಟ್ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top