• Slide
    Slide
    Slide
    previous arrow
    next arrow
  • ನೆರೆ ಸಂತ್ರಸ್ತರಿಗೆ ಸ್ವಂತ ಖರ್ಚಿನಿಂದ ಸಹಾಯ ಮಾಡಿದ ಭೀಮಣ್ಣ ನಾಯ್ಕ್

    300x250 AD

    ಸಿದ್ದಾಪುರ: ತಾಲೂಕಿನ ತ್ಯಾಗಲಿ ಹಾಗೂ ಹಾರ್ಸಿಕಟ್ಟಾ ವ್ಯಾಪ್ತಿಯಲ್ಲಿ ನೆರೆ ಪೀಡಿತರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಭೇಟಿ ಮಾಡಿ ಸಾಂತ್ವನ ಹೇಳಿದರು.

    ತ್ಯಾಗಲಿ ಪಂಚಾಯತ್ ವ್ಯಾಪ್ತಿಯ ಮಾವಿನಕೊಪ್ಪದಲ್ಲಿ ಮಳೆಯಿಂದಾಗಿ ಮನೆಕಳೆದುಕೊಂಡ ವೆಂಕಟೇಶ್ ಶೆಟ್ಟಿಯವರಿಗೆ ಕಾಂಗ್ರೆಸ್ ಜಿಲ್ಲಾದ್ಯಕ್ಷ ಭೀಮಣ್ಣಾ ನಾಯ್ಕ್ ಸಾಂತ್ವನ‌ ಹೇಳಿದ್ದಲ್ಲದೇ ಸ್ವಂತ ಖರ್ಚಿನಿಂದ ಧನಸಹಾಯ ಮಾಡಿ ಧೈರ್ಯ ತುಂಬಿದರು.

    ಹಾಗೂ ಹಾರ್ಸಿಕಟ್ಟಾ ವ್ಯಾಪ್ತಿಯ ಗಾಳಿಜಡ್ಡಿ ಪ್ರಾಥಮಿಕ ಶಾಲೆಯಲ್ಲಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ಆಶ್ರಯ ಪಡೆದ 11 ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು ಹಾಗೂ ಅವರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು.

    300x250 AD

    ಈ ಸಂದರ್ಭದಲ್ಲಿ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top