Slide
Slide
Slide
previous arrow
next arrow

ನಮ್ಮದು ಸಂಘರ್ಷದ ಇತಿಹಾಸ – ಸ್ವರಾಜ್ಯ @ 75

300x250 AD

ಸ್ವರಾಜ್ಯ @ 75: 1775ರಲ್ಲಿ ಗಲ್ಲಿಗೇರಿದ ಬಂಗಾಳದ ಮಹಾರಾಜ ನಂದಕುಮಾರ, ಹೇಸ್ಟಿಂಗ್ಸನ ದುರಾಡಳಿತದ ವಿರುದ್ದ ಸಮರವನ್ನೇ ಸಾರಿದ್ದ. ಇದೇ ಹೇಸ್ಟಿಂಗ್ಸನ ವಿರುದ್ಧ 1781 ರಲ್ಲಿ ಕಾಶಿಯ ರಾಜ ಚೈತನ್ಯಸಿಂಹನೂ ಬಂಡೆದ್ದಿದ್ದ.

1786ರ ವರೆಗೆ ಫಕೀರರ ನಾಯಕ ಮಜ್ನು ನೇತೃತ್ವದಲ್ಲಿ ಹೋರಾಟ ನಡೆಯಿತು. ಮಜ್ನು ಕೊನೆಗೂ ಬ್ರಿಟಿಷರಿಗೆ ಸಿಗಲೇ ಇಲ್ಲ.

1792ರಲ್ಲಿ ಮಲಬಾರಿನಲ್ಲಿ ಕೇರಳವರ್ಮ ಬಂಡಾಯ ನಡೆಸಿದ. 1800ರಲ್ಲಿ ಧೋಂಡಿಯಾ ವಾಘನು ಬ್ರಿಟಿಷರ ವಿರುದ್ಧ ಹೋರಾಟ ಮಾಡುತ್ತ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹೊಳಲು ಗ್ರಾಮಕ್ಕೆ ಬಂದಿದ್ದು, ಅಲ್ಲಿಯ ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದ್ದ.

300x250 AD

ಧೋಂಡಿಯಾ ವಾಘನು ರಾಯಚೂರಿನ ಮಾನವಿ ತಾಲೂಕಿನ ಕೊಟ್ನೆಕಲ್ ಬಳಿ ಹೋರಾಟ ಮಾಡುತ್ತ 10.9.1800ರಲ್ಲಿ ಹುತಾತ್ಮನಾದ.

– ಸಂಗ್ರಹ

Share This
300x250 AD
300x250 AD
300x250 AD
Back to top