• Slide
    Slide
    Slide
    previous arrow
    next arrow
  • ಪ್ರಧಾನಿ ಮೋದಿ ಕೊರಳಲ್ಲಿ ವಿಜೃಂಭಿಸಿದ್ದು ಶಿರಸಿಯ ‘ಮಣಿಪುಷ್ಪ ಹಾರ’

    300x250 AD

    eUK ವಿಶೇಷ: ಕಳೆದ ವಾರ ಪ್ರಧಾನಿ ಮೋದಿಯನ್ನು ಸಿಎಮ್ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅಭಿನಂದಿಸಿ ತೊಡಿಸಿದ್ದ ವಿಶೇಷ ರೀತಿಯ ಗಂಧದ ಮಾಲೆಯೊಂದು ರಾಷ್ಟ್ರಮಟ್ಟದಲ್ಲಿ ಬಹುತೇಕರ ಗಮನ ಸೆಳೆದಿತ್ತು. ಈ ಕುರಿತು ಅಚ್ಛರಿ ಮಾಹಿತಿಯೊಂದು ದೊರಕಿದ್ದು, ಪ್ರಧಾನಿ ಮೋದಿ ಧರಿಸಿದ ಗಂಧದ ಮಾಲೆ ಶಿರಸಿ ಗುಡಿಗಾರರ ಕೈಯ್ಯಲ್ಲರಳಿದ್ದು ಎಂಬುದು ಈಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

    ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿ ಪ್ರಧಾನಿ ಮೋದಿಯನ್ನು ಭೆಟ್ಟಿಯಾಗಿದ್ದರು. ಈ ವೇಳೆ ಅವರಿಬ್ಬರು ಒಟ್ಟಿಗೆ ನಿಂತಿರುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಪ್ರಧಾನಿ ಮೋದಿ ಧರಿಸಿದ್ದ ಗಂಧದ ಮಾಲೆ ವಿಶೇಷ ಆಕರ್ಷಣೆ ಎಂಬುದು ಬಹುತೇಕರ ಮನದಾಳದ ಮಾತಾಗಿತ್ತು.

    ಈ ಕುರಿತು ನ್ಯೂ ಇಂಡಿಯನ್ ಎಕ್ಸಪ್ರೆಸ್ ಮಂಗಳವಾರ ಮುಂಜಾನೆ ವರದಿ ಮಾಡಿದ್ದು, ಪ್ರಧಾನಿ ಮೋದಿ ಧರಿಸಿದ್ದ ಗಂಧದ ಮಣಿಪುಷ್ಪ ಮಾಲೆಯು ಶಿರಸಿಯ ಗುಡಿಗಾರರೊಬ್ಬರ ಕೈಯಲ್ಲಿ ಅರಳಿದ್ದಾಗಿದೆ. ರಾಜ್ಯ ಸರಕಾರ ನಡೆಸುವ ಕಾವೇರಿ ಎಂಪೋರಿಯಮ್ ಮೂಲಕ ಈ ಗಂಧದ ಮಣಿಪುಷ್ಪ ಮಾಲೆಯನ್ನು ಸಿಎಮ್ ಬಸವರಾಜ ಬೊಮ್ಮಾಯಿ ಖರೀದಿಸಿದ್ದರು. ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಷಾ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರವರಿಗೆ ಸಿಎಮ್ ಬಸವರಾಜ ಬೊಮ್ಮಾಯಿ ಶಿರಸಿಯಲ್ಲಿ ತಯಾರಾದ ಗಂಧದ ಮಣಿಪುಷ್ಪ ಮಾಲೆಯನ್ನು ಹಾಕಿ, ಗೌರವಿಸಿದ್ದರು.

    300x250 AD

    ಈ ಕುರಿತಾಗಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪ್ರಕಟಿಸಿದ ವರದಿ ಇಲ್ಲಿದೆ:
    https://www.newindianexpress.com/states/karnataka/2021/aug/03/cm-makes-a-statement-with-unique-sirsi-garlands-2339332.html

    Share This
    300x250 AD
    300x250 AD
    300x250 AD
    Leaderboard Ad
    Back to top