
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರಕ್ಕೆ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳ್ಳಂಬೆಳಿಗ್ಗೆ ಟ್ಯಾಗೋರ್ ಕಡಲತೀರದಲ್ಲಿ ವಾಕಿಂಗ್ ಮಾಡಿದರು. ಇದೇ ವೇಳೆ ಕಡಲ್ಕೊರೆತ ಉಂಟಾದ ಸ್ಥಳಗಳನ್ನೂ ಪರಿಶೀಲಿಸಿದರು. ಈ ಸಮಯದಲ್ಲಿ ಮಾಜಿ ಶಾಸಕ ಸತೀಶ ಸೈಲ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಮುಂತಾದವರು ಇದ್ದರು.