ಯಲ್ಲಾಪುರ: ಭಾರೀ ಮಳೆಯಿಂದ ಭೂ ಕುಸಿತಕ್ಕೊಳಗಾದ ಕಳಚೆ ಪ್ರದೇಶದ ಪಕ್ಷಿನೋಟವನ್ನು ಛಾಯಾಗ್ರಾಹಕ ಗೋಪಿ ಜಾಲಿ ಯವರು ಡ್ರೋನ್ ಮೂಲಕ ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೃಜನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಗೋಪಿ ಜಾಲಿ ಈ ಹಿಂದೆ ಅಘನಾಶಿನಿ ಪ್ರವಾಹದ ಸ್ಥಳಗಳನ್ನೂ ಡ್ರೋನ್ ಮೂಲಕ ಸೆರೆಹಿಡಿದಿದ್ದರು.
ಅಂತರಾಷ್ಟ್ರೀಯ ಖ್ಯಾತಿಯ ಅಘನಾಶಿನಿ ಸಾಕ್ಷ್ಯಚಿತ್ರದಲ್ಲೂ ಕೂಡ ಗೋಪಿಜಾಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.