• Slide
    Slide
    Slide
    previous arrow
    next arrow
  • ಕಾರು ಚಲಾಯಿಸುವಾಗಲೇ ಹೃದಯಾಘಾತವಾಗಿ ಚಾಲಕ ಮೃತ

    300x250 AD

    ಕಾರವಾರ: ಕಾರು ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕನೋರ್ವ ಮೃತಪಟ್ಟ ಘಟನೆ ನಗರದ ಹಬ್ಬುವಾಡ ರಸ್ತೆಯ ವರ್ಚುವಲ್ ಪ್ಯಾರಡೈಸ್ ಅಪಾರ್ಟಮೆಂಟ್ ಬಳಿ ನಡೆದಿದೆ.

    ಗಜಾ ಬಾಂದೇಕರ(68) ಮೃತಪಟ್ಟ ಕಾರು ಚಾಲಕನಾಗಿದ್ದಾನೆ. ನಗರದ ಪ್ರಸಿದ್ದ ವೈದ್ಯ ಡಾ. ಅನ್ವಿತ್ ನಾಯಕ ಅವರ ಮನೆಯಲ್ಲಿ ಕಾರು ಚಾಲಕನಾಗಿ ಗಜಾ ಬಾಂದೇಕರ ಕೆಲಸ ನಿರ್ವಹಿಸುತ್ತಿದ್ದು, ಕೆಲ ದಿನಗಳ ಹಿಂದೆ ಬೈಪಾಸ್ ಸರ್ಜರಿ ಸಹ ಆಗಿತ್ತು ಎನ್ನಲಾಗಿದೆ.

    300x250 AD

    ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಕಾರು ಚಲಾಯಿಸಿಕೊಂಡು ಹಬ್ಬುವಾಡ ರಸ್ತೆಯಲ್ಲಿ ಸಾಗುವಾಗ ಹೃದಯಾಘಾತವಾಗಿದೆ. ಹೃದಯಾಘಾತದಿಂದ ಪಕ್ಕದಲ್ಲೇ ಇದ್ದ ಕಂಪೌಂಡ್ ಗೆ ಕಾರನ್ನ ಚಾಲಕ ಗುದ್ದಿದ್ದಾನೆ. ತಕ್ಷಣ ಸ್ಥಳೀಯರು ಕಾರನ್ನ ತೆಗೆದು ಗಮನಿಸಿದಾಗ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕಾರವಾರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top