ದಾಂಡೇಲಿ: ಕೇಂದ್ರ ಸರಕಾರದ ಮಹತ್ವಕಾಂಕ್ಷಿ ‘ಅಗ್ನಿಪಥ್’ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಯಬಾರದೆಂದು, ಯೋಜನೆಯನ್ನು ಬೆಂಬಲಿಸಿ ದಾಂಡೇಲಿಯಲ್ಲಿ ಅಟಲ್ ಅಭಿಮಾನಿ ಸಂಘಟನೆಯು ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ್ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಯ ಶಿರೇಸ್ತದಾರ್ ಎ.ಕೆ.ಚಿಪ್ಪಲಗಟ್ಟಿಯವರ ಮೂಲಕ ಪ್ರಧಾನಮಂತ್ರಿಗಳಿಗೆ ಬುಧವಾರ ಮನವಿ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ರವಿ ಲಕ್ಷ್ಮೇಶ್ವರ, ಸಂತೋಷ ಸೋಮನಾಚೆ, ರವಿ ಕಾಮತ್, ರಾಜಶೇಖರ ಬೆಳ್ಳಿಗಟ್ಟಿ, ರಾಮಾ ನಾಯ್ಡು, ಜ್ಯೋತಿಬಾ ತುಳಸಿಕರ್, ಪ್ರಶಾಂತ ಪಾಟೀಲ, ಸುನೀಲ.ಎಂ.ಎಚ್, ವೇಣು ನಾಯರ್, ಸಂದೀಪ ನಾಯ್ಕ, ಸುರೇಶ ಪಾಲನಕರ, ಪರಶುರಾಮ ಕಲಾಲ್, ಆನಂದ ಕಾಂಬಳೆ, ಶಿವಾಜಿ ತೇಲಿ, ಬಸವರಾಜ ಹುಂಡೇಕರ, ಲಿಂಗಯ್ಯ ಪೂಜಾರ, ಸುನೀಲ ಭೋವಿ, ವೆಂಕಟರಾವ್ ಕಾಂಬಳೆ, ಮಕ್ಕೆಸಾಬ್, ಕಾಳುರಾಮ್ ದರ್ಜೆ ಹಾಗೂ ಸಂಘಟನೆಯ ಕಾರ್ಯಕರ್ತರು ಇದ್ದರು.