• Slide
    Slide
    Slide
    previous arrow
    next arrow
  • ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಯುವಕ ಮೃತ

    300x250 AD

    ಭಟ್ಕಳ: ವಿಶ್ವಪ್ರಸಿದ್ಧ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗನೊರ್ವ ಸಮುದ್ರಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಮೃತ ಪ್ರವಾಸಿಗ ಮಹೇಶ ಶಿವಶಂಕರಪ್ಪ ಚಿಕ್ಕಬಳ್ಳಾಪುರ ಎಂದು ತಿಳಿದು ಬಂದಿದ್ದು ಈತ ತನ್ನ ಸ್ನೇಹಿತರೊಂದಿಗೆ ಸಿಗಂದೂರು, ಜೋಗ ಜಲಪಾತ ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದ.

    ಶಿವನ ದೇವರ ದರ್ಶನ ಮುಗಿಸಿ ಮೂರು ಜನ ಸ್ನೇಹಿತರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ.ಈ ವೇಳೆ ಸಮುದ್ರ ಅಲೆಗೆ ಸಿಲುಕಿದ ಮಹೇಶ ನಾಪತ್ತೆಯಾಗಿದ್ದು ನಂತರ ಸ್ಥಳೀಯರು ನೀರಿಗೆ ಇಳಿದು ಈತನನ್ನು ಎಳೆದು ತಂದು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top