• Slide
    Slide
    Slide
    previous arrow
    next arrow
  • ಜಿಹಾದಿ ಧರ್ಮಾಂದತೆ ವಿರುದ್ಧ ಕ್ರಮಕ್ಕೆ ಆಗ್ರಹ

    300x250 AD

    ಹಳಿಯಾಳ: ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂದತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ಸ್ಥಳೀಯ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಘಟಕ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರರಾದ ರತ್ನಾಕರ ಅವರಿಗೆ ಸಲ್ಲಿಸಿದರು.

    ಹಿಂದೂ ಸಂಪ್ರದಾಯದಂತೆ ಆಚರಿಸಲಾಗುವ ಕೆಲ ಹಬ್ಬಗಳಿಗೆ ಅಡೆ-ತಡೆಯನ್ನು ಉಂಟುಮಾಡುವುದು, ದೇಶದಲ್ಲಿ ಸುಸಜ್ಜಿತವಾಗಿ ನಡೆಯುತ್ತಿದೆ ಹಿಂದೂ ಕಾರ್ಯಕರ್ತರ ಹತ್ಯೆ, ದೇಶಾದ್ಯಂತ ವಿಷಕಾರಿ ಭಾಷಣ ಮಾಡುವುದು, ಹೀಗೆ ಹಲವಾರು ರೂಪದಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಬೇಕು ಮತ್ತು ಹಿಂದೂಗಳ ಅಲ್ಪಸಂಖ್ಯಾತವಾಗಿರುವ ಸ್ಥಳಗಳಲ್ಲಿ ಅವರಿಗೆ ಭದ್ರತೆ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    300x250 AD

    ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ಶ್ರೀಪತಿ ಭಟ್, ಭಜರಂಗದಳದ ಸಂಯೋಜಕರಾದ ಸರ್ವೇಶ ಖಾಂದೋಳಕರ, ನಿಖಿಲ ತೋರ್ಲೇಕರ, ಗ್ರಾಮಾಂತರ ಭಾಗದ ಕೆಲ ಕಾರ್ಯಕರ್ತರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top