ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಸಂತ ನಾಯ್ಕ ಮಂಡಿಸಿದ “ದಿ ಥೀಮ್ಸ್ ಆಫ್ ಎಕ್ಸೈಲ್ ಆ್ಯಂಡ್ ಐಡೆಂಟಿಟಿ ಕ್ರೈಸಿಸ್ ಇನ್ ಎಮ್. ಜಿ. ವಾಸನ್ಜೀ’ಸ್ ಫಿಕ್ಷನ್ “ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಹೆಚ್. ಡಿ. ಪದವಿಯನ್ನು ಪ್ರದಾನ ಮಾಡಿದೆ. ಇವರಿಗೆ ಕವಿವಿ ಇಂಗ್ಲೀಷ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎನ್. ಹೆಚ್. ಕಲ್ಲೂರರವರು ಮಾರ್ಗದರ್ಶನ ಮಾಡಿದ್ದರು. ಇವರು ಪ್ರಸ್ತುತ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಕೊಪ್ಪದಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (ಜಿ. ಪಿ. ಟಿ – ಇಂಗ್ಲೀಷ)ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಸಂತ ನಾಯ್ಕಗೆ ಕರ್ನಾಟಕ ವಿವಿ ಯಿಂದ ಪಿಹೆಚ್ ಡಿ. ಪದವಿ
