ಕಾರವಾರ: ತಾಲ್ಲೂಕಿನ ಶೇಜವಾಡದಲ್ಲಿ ನೀರು ಕುಡಿಯಲು ಬಂದು ಕಂಪೌಂಡ್ ನ ಕಬ್ಬಿಣದ ಗೇಟ್ಗೆ ಬಡಿದು ಸ್ಥಳದಲ್ಲೇ ಕಡವೆ ಮರಿಯೊಂದು ಮೃತಪಟ್ಟ ಘಟನೆ ನಡೆದಿದೆ.
ಮೂರು ವರ್ಷದ ಹೆಣ್ಣು ಮರಿ ಇದಾಗಿದ್ದು, ನೀರು ಕುಡಿದು ಅವಸರದಲ್ಲಿ ಓಡುವಾಗ ಕಬ್ಬಿಣದ ಗೇಟ್ ಗಮನಿಸದೇ ಅದಕ್ಕೆ ಬಡಿದು ಕಡವೆ ಮರಿ ಮೃತಪಟ್ಟಿದೆ ಎನ್ನಲಾಗಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದಾರೆ.