ಯಲ್ಲಾಪುರ: ವೃದ್ಧನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಮ್ಮಚಗಿ ಸಮೀಪದ ಬಾಳೆಹದ್ದದಲ್ಲಿ ನಡೆದಿದೆ.
ಬಾಳೆಹದ್ದದ ನಾರಾಯಣ ಮಂಜು ಮೊಗೇರ (76) ಮೃತ ವ್ಯಕ್ತಿ. ಒಂದು ವರ್ಷದಿಂದ ಅನಾರೋಗ್ಯಪೀಡಿತನಾಗಿದ್ದ ಈತ, ಔಷಧೋಪಚಾರ ಮಾಡಿದರೂ ಗುಣಮುಖವಾಗದ ಕಾರಣ ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.