• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್.ಸಂಸ್ಥೆಯ ನಿರ್ಧಾರಕ್ಕೆ ಬದ್ಧರಾಗಿ ವ್ಯಾಪಾರಕ್ಕೆ ಮುಂದಾದ ವ್ಯಾಪಾರಸ್ಥರು

    300x250 AD

    ಯಲ್ಲಾಪುರ; ಅಡಿಕೆ ತೂಕದಲ್ಲಿ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸಂಬಂಧ ಟಿ.ಎಸ್.ಎಸ್.ಸಂಸ್ಥೆ ಕೈಗೊಂಡಿರುವ ಧೃಢ ನಿರ್ಧಾರ ವಿರೋಧಿಸಿದ್ದ ಅಡಿಕೆ ವ್ಯಾಪಾರಸ್ಥರು ಈಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ವ್ಯಾಪಾರಕ್ಕೆ ತೊಡಗುವ ನಿರ್ಧಾರವನ್ನು ಪ್ರಕಟಿಸಿದ್ದಕ್ಕೆ ರೈತರ ಪರವಾಗಿ ರೈತ ಮುಖಂಡ ಪಿ.ಜಿ.ಭಟ್ಟ ಬರಗದ್ದೆ ಸ್ವಾಗತಿಸಿದ್ದಾರೆ.

    ಅವರು ಈ ಕುರಿತು ರವಿವಾರ ಹೇಳಿಕೆ ನೀಡಿ,ಅಡಿಕೆ ತೂಕಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ೧೦೦,೨೦೦,೩೦೦ ಗ್ರಾಂ ಹೀಗೆ ಸಣ್ಣ ಲೆಕ್ಕವನ್ನು ವ್ಯಾಪಾರಸ್ಥರ ಲೆಕ್ಕಕ್ಕೇ ಸೇರಿಸಲಾಗುತ್ತಿತ್ತು.ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿತ್ತು.ಇದನ್ನು ಮನಗಂಡು ಸಣ್ಣ ವ್ಯತ್ಯಾಸವೂ ಆಗಬಾರದು ರೈತರಿಗೆ ಹಾನಿಯಾಗಬಾರದೆಂದು ಟಿ.ಎಸ್.ಎಸ್. ನಿರ್ಧಾರ ಕೈಗೊಂಡಿತ್ತು.

    300x250 AD

    ಆದರೆ ಈ ವಿಷಯದಲ್ಲಿ ಯಲ್ಲಾಪುರದ ವ್ಯಾಪಾರಸ್ಥರು ಟಿ.ಎಸ್.ಎಸ್.ಗೆ ವ್ಯಾಪಾರಕ್ಕೆ ಹೊಗದೇ ಅಸಮದಾನ ತೋರಿದ್ದರು.ಈಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿದಿದ್ದು,ವ್ಯಾಪಾರ ಕೈಗೊಳ್ಳಲು ಮುಂದಾಗಿರುವ ವ್ಯಾಪರಸ್ಥರಿಗೆ ಪಿ.ಜಿ.ಭಟ್ಟ ಹಾಗೂ ರೈತ ಸಂಘದ ತಾಲೂಕಾ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಕೃತಜ್ಞತೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top