• Slide
    Slide
    Slide
    previous arrow
    next arrow
  • ನೆರೆ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ ಎಂ.ಎಲ್.ಸಿ ಶಾಂತಾರಾಮ ಸಿದ್ಧಿ

    300x250 AD

    ಯಲ್ಲಾಪುರ: ತಾಲೂಕಿನಲ್ಲಿ ನೆರೆಹಾನಿಗೊಳಗಾದ ಪ್ರದೇಶಗಳಿಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಗಳನ್ನು ಭೇಟಿ ಮಾಡಿ‌ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಜೀವದ ಹಂಗು ತೊರೆದು ಕುಸಿದ ಮಣ್ಣನ್ನು ನಿರಂತರವಾಗಿ ತೆರವುಗೊಳಿಸುತ್ತಿರುವ ಜೆಸಿಬಿ ಆಪರೇಟರ್ ಅನ್ನು ಅಭಿನಂದಿಸಿ ಮುನ್ನೆಚ್ಚರಿಕೆ ವಹಿಸಿ ಕಾರ್ಯಮಾಡುವಂತೆ ಸೂಚಿಸಿದರು.
    ಹಾಗೂ ಮಳೆಯ ರಭಸಕ್ಕೆ‌ ಕೊಚ್ಚಿ ಹೋದ ಗುಳ್ಳಾಪುರ ಸೇತುವೆ ವಿಕ್ಷಣೆ ಮಾಡಿದರು ಮತ್ತು ಕಾಗೇರಿ ಪೆಟ್ರೋಲ್ ಬಂಕ್ ಗೆ ಭೇಟಿ ‌ನೀಡಿ ಹಾನಿಯ ಬಗ್ಗೆ ಪರಿಶಿಲಿಸಿದರು. ಗುಳ್ಳಾಪುರದಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರವನ್ನು ಪರಿಶಿಲಿಸಿ ಯಾವುದೇ ಸಮಸ್ಯೆಗಳಿದ್ದರೆ ಕೂಡಲೆ ಸಂಪರ್ಕಿಸುವಂತೆ ಸೂಚಿಸಿದರು.
    ಈ ಸಂದರ್ಭದಲ್ಲಿ ಭಾಜಪ ಉತ್ತರಕನ್ನಡ ಜಿಲ್ಲಾ ಎಸ್.ಟಿ‌ ಮೊರ್ಚ್ ಕಾರ್ಯದರ್ಶಿ ಸುರೇಶ ಸಿದ್ದಿ ,ಜೀವನ‌ವಿಕಾಸ ಟ್ರಸ್ಟ್ ನ ಕಾರ್ಯನಿರ್ವಾಹಕ ಪ್ರಥಮ್ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top