• Slide
    Slide
    Slide
    previous arrow
    next arrow
  • ಸಾಕಿದ ಬೆಕ್ಕನ್ನು ಕಾಪಾಡಲು ಹೋದ ಯುವಕ ಮೃತ

    300x250 AD

    ಕುಮಟಾ: ತಾಲೂಕಿನ ಹರ್ಕಡೆಯಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಅಸ್ವಸ್ಥನಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಮೃತಪಟ್ಟಿರುವ ಘಟನೆ ನಡೆದಿದೆ. ಹರ್ಕಡೆ ನಿವಾಸಿ ರಾಜೇಂದ್ರ ವಿಠೋಬ ಆಚಾರಿ ಮೃತ ಯುವಕ ಎಂದು ತಿಳಿದುಬಂದಿದೆ.

    ಈತ ಮನೆಯಲ್ಲಿ ಸಾಕಿದ ಬೆಕ್ಕಿನ ಜೊತೆ ಆಟವಾಡುತ್ತಿದ್ದ ವೇಳೆ ಬೆಕ್ಕು ಬಾವಿಗೆ ಬಿದ್ದಿದೆ. ಬೆಕ್ಕನ್ನು ರಕ್ಷಿಸಲು ಹೋದ ರಾಜೇಂದ್ರ ಬಾವಿಗೆ ಬಿದ್ದು ಅಸ್ವಸ್ಥಗೊಂಡಿದ್ದನು. ಇದನ್ನು ಗಮನಿಸಿದ ಕುಟುಂಬಸ್ಥರು ಸ್ಥಳೀಯರ ಸಹಕಾರದಲ್ಲಿ ರಾಜೇಂದ್ರನನ್ನು ಬಾವಿಯಿಂದ ಮೇಲೆಕ್ಕೆತ್ತಿದ್ದಾರೆ. ಅಲ್ಲದೇ ಈತನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಮೃತಪಟ್ಟಿದ್ದಾನೆ. ಕುಮಟಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top