ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ್ನ ನ್ಯಾಸರ್ಗಿ ಹಾಗೂ ಕುಂದರ್ಗಿ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ದುಡಿಯೋಣ ಬಾ ಅಭಿಯಾನ ನಡೆಸಲಾಯಿತು.
ಈ ವೇಳೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ ನೀಡಲಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಮಾನ ಕೆಲಸ ಸಮಾನ ಕೂಲಿ, ಫಲಾನುಭವಿಗಳ ನೇರ ಖಾತೆಗೆ ಹಣ ಪಾವತಿ, ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳು, ಉದ್ಯೋಗ ಖಾತ್ರಿ ಕೆಲಸದ ವೇಳೆಯಲ್ಲಿ ಮರಣಕ್ಕೀಡಾದರೆ ಇಲ್ಲವೇ ಶಾಶ್ವತವಾಗಿ ಅಂಗ ವೈಪಲ್ಯತೆ ಕಂಡುಬಂದಲ್ಲಿ 2ಲಕ್ಷ ರೂಗಳ ಪರಿಹಾರ ಧನ ನೀಡುವುದು ಹಾಗೂ ಇನ್ನಿತರ ಮಾಹಿತಿ ನೀಡಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಲಾ 3ಲಕ್ಷ ವೆಚ್ಚದಲ್ಲಿ ನ್ಯಾಸರ್ಗಿಯಲ್ಲಿ ಟ್ರೇಂಚ್ ಕಾಮಗಾರಿ, ಕುಂದರ್ಗಿಯಲ್ಲಿ ಅರಣ್ಯದಲ್ಲಿ ಹೊಸ ಕೆರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಇದೇ ವೇಳೆ ಅಸಂಘಟಿತ ಕೂಲಿಕಾರರಿಗೆ ನೀಡಲಾಗುವ ಇ-ಶ್ರಮ್ ಕಾರ್ಡ್ ಪಡೆಯುವಂತೆ ತಿಳಿಸಲಾಯಿತು. ಸಮುದಾಯದ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ಸಾಧ್ಯ ಎಂಬುದರ ಅರಿವು ಮೂಡಿಸಲಾಯಿತು.