ದಾಂಡೇಲಿ: ಮನೆಯ ಹೊರಗಡೆ ಇರುವ ಸಾರ್ವಜನಿಕ ಚೇಂಬರ್ ಒಡೆದು ತ್ಯಾಜ್ಯ ನೀರು ಸ್ಥಳೀಯ ಮನೆಗಳಿಗೆ ನುಗ್ಗಿ ಜನಜೀವನಕ್ಕೆ ತೀವ್ರ ತೊಂದರೆಯಾಗುತ್ತಿರುವ ಘಟನೆ ನಗರದ ಟೌನಶಿಪ್ನಲ್ಲಿ ವರದಿಯಾಗಿದೆ.
ನಗರದ ಟೌನಶಿಪ್ನಲ್ಲಿ ನಾಡವರ ಸಮಾಜ ಭವನದ ಹತ್ತಿರದಲ್ಲಿರುವ ಜನವಸತಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಈ ಸಮಸ್ಯೆ ಎದುರಾಗಿದೆ. ಇಲ್ಲಿ ಚೇಂಬರ್ ಒಡೆದು ತಿಂಗಳಾದರೂ ನಗರಸಭೆ ಮಾತ್ರ ಈವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಚೇಂಬರ್ ಸಮಸ್ಯೆಯಿಂದ ಮನೆಯೊಳಗಡೆ ತ್ಯಾಜ್ಯ ನೀರು ಪ್ರತಿದಿನ ಬರುತ್ತಿದ್ದು, ಸ್ಥಳೀಯ ಎರಡ್ಮೂರು ಮನೆಗಳಿಗೆ ತೀವ್ರ ತೊಂದರೆಯಾಗಿರುವುದರ ಜೊತೆಯಲ್ಲಿ ರೋಗಭಯದ ಆತಂಕದಲ್ಲಿದ್ದಾರೆ. ಇಂತಹ ಅಸಹ್ಯಕರ ವಾತವರಣದಲ್ಲಿ ಸರಿಯಾಗಿ ಊಟ- ಉಪಹಾರ ಮಾಡಲು ಅಸಾಧ್ಯದ ಸ್ಥಿತಿ ನಿರ್ಮಾಣವಾಗಿದೆ.