• Slide
    Slide
    Slide
    previous arrow
    next arrow
  • ನಾಗರಿಕ ಸೇವಾ ಪರೀಕ್ಷೆಗಳ ಕುರಿತು ಉಚಿತ ಕಾರ್ಯಾಗಾರ

    300x250 AD

    ಶಿರಸಿ: ಕೇಂದ್ರ / ರಾಜ್ಯ ನಾಗರಿಕ ಸೇವಾ ಪರೀಕ್ಷೆಗಳು ಗಗನ ಕುಸುಮವಲ್ಲ. ಸೂಕ್ತ ಮಾರ್ಗದರ್ಶನ, ತರಬೇತಿ ಪಡೆದರೆ ಖಂಡಿತ ಯಶಸ್ಸು ಸಾಧ್ಯ ಎನ್ನುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅತ್ಯುನ್ನತ ನಾಗರಿಕ ಸೇವೆಗಳ ಅಧಿಕಾರಿಗಳಾಗಲು ಬಯಸುವ ಜಿಲ್ಲೆಯ ಯುವ ಆಕಾಂಕ್ಷಿಗಳಿಗೆ ಈ ಕುರಿತು ವಿಸ್ತೃತವಾದ ಮಾಹಿತಿಯನ್ನು ನೀಡುವ ಕುರಿತು ಶ್ರೀ ಸ್ವರ್ಣವಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಅಡ್ಮಿನಿಸ್ಟ್ರೇಷನ್ ಮತ್ತು ಮ್ಯಾನೇಜ್‌ಮೆಂಟ್ (ಸ್ವಯಂ) ಶಿರಸಿ ಸಂಸ್ಥೆಯವರು ಜೂ.5 ,ರವಿವಾರದಂದು 10 ಗಂಟೆಗೆ ಶಿರಸಿಯ ಲಯನ್ಸ್ ಶಾಲೆಯಲ್ಲಿ IAS/IPS/KAS ತಳಪಾಯ ತರಬೇತಿಯನ್ನು Foundation Course ನೀಡಲಿದ್ದಾರೆ.


    ಅದೇ ವೇಳೆ ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಶಿರಸಿಯ ಹೆಮ್ಮೆಯ ಪುತ್ರರಾದ ಮನೋಜ್ ಆರ್. ಹೆಗಡೆಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಹಿರಿಯ ಮತ್ತು ಅನುಭವಿ ನಾಗರಿಕ ಸೇವಾ ಅಧಿಕಾರಿಗಳಾದ ಸಂತೋಷ ಹೆಗಡೆ, ಕಾರ್ತಿಕ ಹೆಗಡೆಕಟ್ಟೆ, ಸಹನಾ ಬಾಳಕಲ್, ಎಸ್.ಎಮ್.ಹೆಗಡೆ ಹಾಗೂ ಇತರರು ತರಬೇತುದಾರರಾಗಿ ಆಗಮಿಸಲಿದ್ದಾರೆ. ಕಾರಣ ಪಿಯುಸಿ – ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಪದವೀಧರರು, ಸ್ನಾತಕೋತ್ತರ ಪದವೀಧರರು, ಆಸಕ್ತ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top