
ಯಲ್ಲಾಪುರ: ಮಳೆಯ ಅಬ್ಬರಕ್ಕೆ ಯಲ್ಲಾಪುರ ತತ್ತರಿಸಿ ಹೋಗಿರುವ ಬೆನ್ನಲ್ಲೇ ತಾಲೂಕಿನ ತಳಕೇಬೈಲ್ ಪ್ರದೇಶದಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಕಳೆದೆರಡು ದಿನಗಳಿಂದ ಗುಡ್ಡ ಕುಸಿಯುತ್ತಲೇ ಇದ್ದು ಕಳಚೆ – ಮಲವಳ್ಳಿ ಭಾಗಕ್ಕೆ ಸಂಪರ್ಕ ಅಸಾಧ್ಯವಾಗಿದೆ.
ಕಳಚೆ ಮಲವಳ್ಳಿ ಪ್ರದೇಶದಗಳಲ್ಲಿ ಭೂ ಕುಸಿತದಿಂದ ಅಪಾರ ಹಾನಿಯುಂಟಾಗಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಈ ಭಾಗಕ್ಕೆ ಸಂಕಲ್ಪ ಕಲ್ಪಿಸುವ ಏಕೈಕ ರಸ್ತೆಯೂ ಸಂಪೂರ್ಣವಾಗಿ ಕುಸಿದುಹೋಗಿದ್ದು ಪರಿಹಾರ ಕಾರ್ಯಕ್ಕೆ ತೆರಳಲೂ ರಸ್ತೆಯಿಲ್ಲದೇ ಸಮಸ್ಯೆಯುಂಟಾಗಿದೆ.