• Slide
    Slide
    Slide
    previous arrow
    next arrow
  • ಪ್ರಧಾನಿಯಿಂದಾಗಿ ಆಧಾರ್ ಕಾರ್ಡ್ ಪಡೆದ ವಿಶೇಷ ಚೇತನ ಯುವಕ

    300x250 AD

    ಮಂಡ್ಯ: ಆಧಾರ್‌ ಕಾರ್ಡ್‌ ಮಾಡಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದ ಮಂಡ್ಯದ ವಿಶೇಷ ಚೇತನ ಯುವಕನ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿಯವರ ಕಾರಣದಿಂದ ಬಗೆಹರಿದಿದೆ.

    ಮಂಡ್ಯದ ತಂಡಸನಹಳ್ಳಿ ಗ್ರಾಮದ ನೂತನ್ ಎಂಬುವವರು ಹುಟ್ಟಿನಿಂದಲೇ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದಾರೆ. ವಿಕಲಾಂಗತೆಯೂ ಅವರನ್ನು ಕಾಡುತ್ತಿದೆ.

    ಈ ಹಿಂದೆ ಭಾವಚಿತ್ರದ ಆಧಾರದ ಮೇಲೆ ಅಧಿಕಾರಿಗಳು ನೂತನ್‌ಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದರು. ಹೀಗಾಗಿ ಪಿಂಚಣಿ ಹಣ ಮತ್ತು ಇತರ ಸರ್ಕಾರಿ ಸವಲತ್ತುಗಳು ದೊರೆಯುತ್ತಿದ್ದವು. ಆದರೆ ಕಳೆದ ಎರಡೂವರೆ ವರ್ಷದ ಹಿಂದೆ ಇವರಿಗೆ ಬರುತ್ತಿದ್ದ ಪಿಂಚಣಿ ಹಾಗೂ ಸರ್ಕಾರಿ ಸವಲತ್ತುಗಳು ನಿಂತು ಹೋಗಿವೆ. ಈ ಬಗ್ಗೆ ವಿಚಾರಿಸಿದಾಗ, ಅವರ ಆಧಾರ್ ಕಾರ್ಡ್ ಬ್ಲಾಕ್ ಆಗಿದೆ ಎಂಬ ಮಾಹಿತಿ ದೊರೆತಿದೆ.

    ಆಧಾರ್ ಕಾರ್ಡ್​ ಅನ್ನು ಅಪ್‌ಡೇಟ್ ಮಾಡಿಸಲು ಹೋದರೆ ನೂತನ್​​ ಅವರ ಹೆಬ್ಬರಳು, ಕಣ್ಣುಗಳ ಸ್ಕ್ಯಾನ್​ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಆಧಾರ್‌ ಕಾರ್ಡ್‌ ಮತ್ತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ರಾಜಕಾರಣಿಗಳನ್ನು ಭೇಟಿಯಾಗಿ ಕಷ್ಟ ತೋಡಿಕೊಂಡರೂ ಸಮಸ್ಯೆ ಬಗೆಹರಿದಿರಲಿಲ್ಲ. ನಂತರ ರೈತ ಮುಖಂಡ ಮಧುಚಂದನ್​ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.

    300x250 AD

    ಕೂಡಲೇ ಅವರು ಈ ಸಮಸ್ಯೆ ಬಗ್ಗೆ ಪಿಎಂಒ ಕಛೇರಿ​ ಮತ್ತು ಪ್ರಧಾನಿ ಮೋದಿಗೆ ಟ್ವೀಟ್​ ಮಾಡಿದ್ದಾರೆ. ಇದರಿಂದ ಎರಡು ವರ್ಷಗಳ ಸಮಸ್ಯೆ ಎರಡೇ ದಿನಕ್ಕೆ ಬಗೆಹರಿದಿದೆ. ನೂತನ್​ ಅವರಿಗೆ ಆಧಾರ್‌ ಸಿಕ್ಕಿದೆ.

    ಕೃಪೆ- news13.in

    Share This
    300x250 AD
    300x250 AD
    300x250 AD
    Leaderboard Ad
    Back to top