• Slide
    Slide
    Slide
    previous arrow
    next arrow
  • ಭೈರುಂಬೆಯಲ್ಲಿ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮ

    300x250 AD

    ಶಿರಸಿ: ತಾಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಗೆಳೆಯರ ಬಳಗ ಭೈರುಂಭೆ (ರಿ) ಮತ್ತು ಫಾಟಕ ಯಕ್ಷ ಸಂಸ್ಕೃತಿ ಟ್ರಸ್ಟ (ರಿ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷೋತ್ಸವ ಕಾರ್ಯಕ್ರಮವು ನಡೆಯಲಿದೆ.

    ಬಾಲಚಂದ್ರ ಮ. ಹೆಗಡೆ, ಗಡಿಕೈ ಇವರ ಪ್ರಾಯೋಜಕತ್ವದಲ್ಲಿ ಜೂ.4, ಶನಿವಾರ ಸಂಜೆ 5.30 ಕ್ಕೆ ಭೀಷ್ಮ ವಿಜಯ ಪ್ರಸಂಗವು ಜರುಗಲಿದೆ.
    ಹಿಮ್ಮೇಳದ ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ, ಹಿಲ್ಲೂರು, ಮದ್ದಲೆವಾದಕರಾಗಿ ಎ.ಪಿ. ಫಾಟಕ ಕಾರ್ಕಳ,ಶ್ರೀಪಾದ ಭಟ್ ಮೂಡುಗಾರು,ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ,ಗುರುರಾಜ ಐತಾಳ ಉಪಸ್ಥಿತರಿರಲಿದ್ದಾರೆ.
    ಮುಮ್ಮೇಳದಲ್ಲಿ ತಿಮ್ಮಪ್ಪ ಹೆಗಡೆ, ಶಿರಳಗಿ, ವೆಂಕಟೇಶ ಮಾಗೋಡು,ವಿನಾಯಕ ಹೆಗಡೆ, ಕಲಗದ್ದೆಶಶಿಕಾಂತ ಶೆಟ್ಟಿ, ಕಾರ್ಕಳ,ಸದಾಶಿವ ಭಟ್, ಮಳವಳ್ಳಿ,ದೀಪಕ್, ಕೆ.ಜಿ. ಮಂಜುನಾಥ್, ಪುರಪ್ಪೆಮನೆ,ಶ್ರೀಧರ ಹೆಗಡೆ, ಚಪ್ಪರಮನೆ,ಕೃಷ್ಣಮೂರ್ತಿ ತುಂಗ, ಬೆಂಗಳೂರು ದಿವಾಕರ ಹೆಗಡೆ, ಕೆರೆಹೊಂಡ, ನಾಗೇಶ್, ಕುಳಿಮನೆ, ಗಣಪತಿ ಹೆಗಡೆ ಹೊನ್ನೆಕೈ ಕು. ಅಕ್ಷತಾ ರಾವ್ ಮತ್ತು ಕು. ನಮ್ರತಾ ರಾವ್ ಭಾಗವಹಿಸಲಿದ್ದಾರೆ.

    300x250 AD

    ಜೂ.5, ಭಾನುವಾರ ಸಂಜೆ ಭೀಷ್ಮ ವಿಜಯ ಪ್ರಸಂಗದ ಅವಲೋಕನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ರತ್ನಾಕರ ಉಪಾಧ್ಯ, ಶಿವಮೊಗ್ಗ ಮತ್ತು ದಿವಾಕರ ಹೆಗಡೆ ಕೆರೆಹೊಂಡ ಭಾಗವಹಿಸಲಿದ್ದಾರೆ.
    ಸ್ಥಳೀಯ ಸಹ ಕಲಾಭಿಮಾನಿಗಳ ಸಹಕಾರದೊಂದಿಗೆ ಜೂ.5 ಭಾನುವಾರ ಸಂಜೆ 5.30 ಕ್ಕೆ ಸತ್ಯವಾನ ಸಾವಿತ್ರಿ ಪ್ರಸಂಗವು ನಡೆಯಲಿದ್ದು
    ಹಿಮ್ಮೇಳ ಭಾಗವತರು ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ,ಪ್ರಸನ್ನ ಭಟ್ ಬಾಳ್ಕಲ್ ಮದ್ದಲೆ ವಾದಕ ಎಂ.ಪಿ. ಫಾಟಕ್, ಕಾರ್ಕಳ, ಚಿನ್ಮಯ್ ಅಂಬಾರಗೋಡ್ಲು, ಚಂಡೆ ವಾದನದಲ್ಲಿ ಪ್ರಸನ್ನ ಹೆಗ್ಗಾರ್ ಆಗಮಿಸುತ್ತಾರೆ.
    ಮುಮ್ಮೇಳದಲ್ಲಿ ತಿಮ್ಮಪ್ಪ ಹೆಗಡೆ ಶಿರಳಗಿ, ಸದಾಶಿವ ಭಟ್ ಮಳವಳ್ಳಿ, ದಿವಾಕರ ಹೆಗಡೆ, ಕೆರೆಹೊಂಡ, ಶಂಕರ ಹೆಗಡೆ, ನೀಲ್ಕೋಡು
    ಕೆ.ಜಿ. ಮಂಜುನಾಥ, ಪುರಪ್ಪೆಮನೆ, ಶ್ರೀಧರ ಹೆಗಡೆ ಚಪ್ಪರಮನೆ,ದೀಪಕ್, ಕು. ಅಕ್ಷತಾ ರಾವ್ ಮತ್ತು ಕು. ನಮ್ರತಾ ರಾವ್
    ಇರಲಿದ್ದಾರೆ.
    ಆಸಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಲು ವಿನಂತಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top