• Slide
    Slide
    Slide
    previous arrow
    next arrow
  • ಮನಸ್ಸಿನ ಪ್ರಬಲತೆಗೆ,ಪ್ರಬಲ ದೇಹವು ಅತ್ಯಗತ್ಯ- ಈಶ್ವರ್ ನಾಯ್ಕ್

    300x250 AD

    ಭಟ್ಕಳ:ನಗರದ ಶ್ರೀಗುರು ಸುಧೀಂದ್ರ ಮಹಾವಿದ್ಯಾಲಯದ 2021- 22ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ‘ಖೇಲೊ ಎಸ್‌ಜಿಯಸ್‌ಸಿ’ಯನ್ನು ಕ್ರೀಡಾ ಜ್ಯೋತಿಯನ್ನು ಶೋಟೊಕಾನ್ ಕರಾಟೆ ಸಂಸ್ಥೆಯ ತರಬೇತುದಾರ ಈಶ್ವರ ನಾಯ್ಕ ಆಸರಕೇರಿಯವರು ಸ್ವೀಕರಿಸುವ ಮೂಲಕ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು ಪ್ರಬಲ ಮನಸ್ಸನ್ನು ಹೊಂದಬೇಕಾದರೆ ಪ್ರಬಲ ದೇಹವು ಅಗತ್ಯ. ಆದುದರಿಂದ ಯುವ ಜನತೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರಬಲ ದೇಹ ಮತ್ತು ಮನಸ್ಸನ್ನು ಹೊಂದಬೇಕು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ವಿ.ನಾಯಕ ಕ್ರೀಡಾಳುಗಳಿಗೆ ಶುಭ ಹಾರೈಸಿ, ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಆಟದ ಮೈದಾನ ಹಾಗೂ ಇತರ ಮೂಲಭೂತ ಸೌಕರ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    300x250 AD

    ಪ್ರಾಂಶುಪಾಲ ಪ್ರೊ.ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಉಪ ಪ್ರಾಂಶುಪಾಲ ಪ್ರೊ.ಫಣಿಯಪ್ಪಯ್ಯ ಹೆಬ್ಬಾರ್ ಸ್ವಾಗತಿಸಿದರು. ಕಲಾ ಮತ್ತು ನಿರ್ವಹಣಾ ವಿಭಾಗದ ಉಪ ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಭಟ್ ‘ಕೋಸ್ಟಲ್ ಟು ಗ್ಲೋಬಲ್’ ಅಭಿಯಾನವನ್ನು ಪರಿಚಯಿಸಿದರು. ಉಪನ್ಯಾಸಕರುಗಳಾದ ದೇವೇಂದ್ರ ಕಿಣಿ ಕ್ರೀಡಾ ಪ್ರತಿಜ್ಞೆ ಭೋದಿಸಿದರು ಮತ್ತು ಆನಂದ್ ದೇವಾಡಿಗ ವಂದಿಸಿದರು. ವಿದ್ಯಾರ್ಥಿನಿ ರೋಜಾ ಬಂಢಾರಿ ನಿರೂಪಿಸಿದರು.

    ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳಿಗಾಗಿ ಈಶ್ವರ ನಾಯ್ಕ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ ನಾಯ್ಕ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top