• Slide
    Slide
    Slide
    previous arrow
    next arrow
  • ಹೊಲದಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸಿಡಿಲು ಬಡಿದು ಸಾವು

    300x250 AD

    ಕಾರವಾರ: ತಾಲ್ಲೂಕಿನ ಮದನೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವಕನೋರ್ವ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.

    ಮೃತ ಯುವಕನು ಮದನೂರು ನಿವಾಸಿ ಆನಂದ ದೊಂಡು ಬರಗಾಡೆ (21) ಎಂಬುವವನಾಗಿದ್ದು ತಾಲೂಕಿನಾದ್ಯಂತ ಶುಕ್ರವಾರ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆ ಹೊಲದ ಕೆಲಸಕ್ಕೆಂದು ತೆರಳಿದ್ದನು. ಈ ವೇಳೆ ದುರದೃಷ್ಟವಶಾತ್ ಸಿಡಿಲು ಆರ್ಭಟಿಸಿದ್ದು ಹೊಲದಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ತಂದೆತಾಯಿಗೆ ಒಬ್ಬನೇ ಗಂಡುಮಗನಾಗಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top