• Slide
    Slide
    Slide
    previous arrow
    next arrow
  • ವಿಎಸ್ಆರ್ ಫೌಂಡೇಶನ್ ಇಂದ ಮೂರು ದಿನಗಳ ‘ಬೀ ಕೀಪಿಂಗ್’ ಸಮ್ಮೇಳನ

    300x250 AD

    ಬೆಂಗಳೂರು: ವಿ.ಶಿವರಾಮ್ ರಿಸರ್ಚ್ ಫೌಂಡೇಷನ್ ನಿಂದ ಏಷಿಯಾ-ಪೆಸಿಫಿಕ್ ಕಾನ್ಫರೆನ್ಸ್ ಒನ್ ಬೀ ಕೀಪಿಂಗ್ ಫಾರ್ ಸಸ್ಟನೇಬಲ್ ಅಗ್ರಿಕಲ್ಚರ್, ಇಕೊಸಿಸ್ಟಮ್ ಸರ್ವಿಸಸ್ ಆಂಡ್ ರೂರಲ್ ಲೈವ್ಲಿಹುಡ್ಸ್ (BEE-2022) ಎಂಬ ಸಮ್ಮೇಳನವನ್ನು ಬೆಂಗಳೂರಿನ ದ ಕಾಪಿಟೊಲ್ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ.

    ಮೇ.18ರಿಂದ 20ರ ವರೆಗೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭವು ಮೇ.18 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಬಸವರಾಜ ಹೊರಟ್ಟಿ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖಾ ಸಚಿವ ಎನ್ ಮುನಿರತ್ನ ಹಾಗೂ ಬೆಂಗಳೂರು ಯುನಿವರ್ಸಿಟಿ ವೈಸ್ ಚಾನ್ಸಲರ್ ಪ್ರೊ.ಡಾ.ಕೆ.ಆರ್ ವೇಣುಗೋಪಾಲ ಆಗಮಿಸಲಿದ್ದಾರೆಂದು ಫೌಂಡೇಶನ್ ಅಧ್ಯಕ್ಷ ಡಾ.ವಿ.ಶಿವರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top