• Slide
    Slide
    Slide
    previous arrow
    next arrow
  • ಸಿವಿಲ್ ನ್ಯಾಯಾಧೀಶ ಪ್ರವೀಣಕುಮಾರ್ ವರ್ಗಾವಣೆ

    300x250 AD

    ದಾಂಡೇಲಿ: ಕಳೆದ ಮೂರು ವರ್ಷಗಳಿಂದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಅನುಪಮ ಸೇವೆ ಸಲ್ಲಿಸಿ, ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದ ಪ್ರವೀಣಕುಮಾರ್ ಆರ್.ಜೆ.ಎಸ್ ಅವರಿಗೆ ಹಾಸನ ಜಿಲ್ಲೆಯ ಹೊಳೆ ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ.

    ಕಳೆದ ಮೂರು ವರ್ಷಗಳಿಂದ ಪ್ರವೀಣಕುಮಾರ್ ಅವರು ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಕ್ರಿಯಾಶೀಲ ಕಾರ್ಯವೈಖರಿಯ ಮೂಲಕ ಅಪಾರ ಜನಖ್ಯಾತಿಗೆ ಪಾತ್ರರಾಗಿದ್ದರು. ಲೋಕ್ ಅದಾಲತ್ ಕಾರ್ಯಕ್ರಮವನ್ನು ಐತಿಹಾಸಿಕವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

    300x250 AD

    ತೆಪ್ಪದ ಮೂಲಕ ತೆರಳಿ ನದಿ ತೀರದ ಜನರಿಗೆ ಕಾನೂನು ಅರಿವು, ನದಿ ಪಾತ್ರದಲ್ಲಿ ಅನುಸರಿಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಿದಂತಹ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

    Share This
    300x250 AD
    300x250 AD
    300x250 AD
    Leaderboard Ad
    Back to top