• Slide
    Slide
    Slide
    previous arrow
    next arrow
  • ಚಾರಣಿಗರ ಪಾಲಿನ ನೆಚ್ಚಿನ ತಾಣ ‘ಭೀಮನ ಬುಗುರಿ’

    300x250 AD

    ಕಾರವಾರ: ತಾಲೂಕಿನ ತೊಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಭೀಮನ ಬುಗುರಿ ಇದೀಗ ಚಾರಣಿಗರ ಪಾಲಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಕಾಲ್ನಡಿಗೆಯಲ್ಲಿ ಮಾತ್ರ ತೆರಳು ಅವಕಾಶ ಇರುವ ಕಾರಣ ವಾರಾಂತ್ಯ, ರಜಾ ದಿನಗಳಲ್ಲಿ ಪ್ರವಾಸಿಗರು, ಸಾಹಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿ ಸೌಂದರ್ಯ ಸವಿಯುತ್ತಿದ್ದಾರೆ.

    ಭೀಮನ ಬುಗುರಿಗೆ ಸುಮಾರು ಎರಡು ತಾಸು ಕಾಲ್ನಡಿಗೆ ಮೂಲಕ ಕಾಡಿನ ಮಧ್ಯದ ದುರ್ಗಮ ಪ್ರದೇಶದಲ್ಲಿ ತೆರಳಬೇಕು. ಹೀಗೆ ತೆರಳುವಾಗ ಮಾರುಕಟ್ಟೆಯಲ್ಲಿಯೂ ಸಿಗದಂತಹ ಕಾಡುಹಣ್ಣುಗಳು ಇಲ್ಲಿ ಸಿಗುತ್ತವೆ. ಮುಂದೆ ಸಾಗಿದರೆ ಮನೆಯೊಂದು ಇದ್ದು, ಭಾರೀ ಶ್ರಮದೊಂದಿಗೆ ಜೀವನ ಮಾಡುತ್ತಿದ್ದಾರೆ. ಅಲ್ಲಿಂದ ಮತ್ತೆ ಅರ್ಧ ಗಂಟೆ ಕ್ರಮಿಸಿದರೆ ಬೃಹತ್ ಕಲ್ಲಿನ ಮೇಲೆ ಬುಗುರಿಯಾಕಾರದ ಬಂಡೆಯೊಂದು ಕಾಣಸಿಗುತ್ತದೆ. ಇದೇ ಭೀಮನ ಬುಗುರಿ. ಈ ಬಂಡೆಗಲ್ಲನ್ನ ಏರಿ ಕಣ್ಣು ಹಾಯಿಸಿದಷ್ಟು ದೂರವೂ ಅಚ್ಚ ಹಸಿರಿನಿಂದಲೇ ಗೋಚರಿಸುವ ಈ ತಾಣ, ಎಂಥವರನ್ನೂ ಮೂಕವಿಸ್ಮಿತಗೊಳಿಸುತ್ತದೆ.

    300x250 AD

    ಹಿಂದೆ ಪಾಂಡವರು ಈ ಪ್ರದೇಶದಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಭೀಮ ಬೃಹತ್ ಬಂಡೆಗಲ್ಲನ್ನ ಬುಗರಿಯಂತೆ ತಿರುಗಿಸಿ, ಕಲ್ಲಿನ ಮೇಲೆ ನಿಲ್ಲಿಸಿದ್ದ ಎಂಬ ಪ್ರತೀತಿ ಕೂಡ ಇದೆ. ಹೀಗಾಗಿ ಈ ತಾಣಕ್ಕೆ ‘ಭೀಮನ ಬುಗುರಿ’ ಎಂದೂ ಹೆಸರು ಬಂದಿದ್ದು, ಚಾರಣ ಪ್ರಿಯರ ಹಾಟ್‍ಸ್ಪಾಟ್ ಆಗಿದೆ. ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿರುವ ಈ ಪ್ರದೇಶವನ್ನ ಇನ್ನಷ್ಟು ಅಭಿವೃದ್ಧಿಪಡಿಸಿದರೆ ಮತ್ತಷ್ಟು ಪ್ರವಾಸಿಗರು ಇಲ್ಲಿಗೆ ಹರಿದುಬರಲಿದ್ದಾರೆನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top