• Slide
    Slide
    Slide
    previous arrow
    next arrow
  • ಯುವಾ ಬ್ರಿಗೇಡ್‍ನಿಂದ ವಿವೇಕ ಯಾತ್ರೆ ಕಾರ್ಯಕ್ರಮ

    300x250 AD

    ಹೊನ್ನಾವರ: ಯುವಾಬ್ರಿಗೇಡ್ ತಾಲೂಕು ಘಟಕದ ವತಿಯಿಂದ ತಾಲೂಕಿನ ಮಂಕಿಯ ಹಳೇಮಠ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಭದ್ರಾಂಬಿಕೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆಯ ಮೂಲಕ ವಿವೇಕ ಯಾತ್ರೆ ಕಾರ್ಯಕ್ರಮ ನಡೆಯಿತು.

    ಈ ವೇಳೆ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರಿಂದ ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಿ ಮಂಗಳ ಸಾರಥಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅರ್ಚಕರಿಗೆ ಸನ್ಮಾನ ಮಾಡಲಾಯಿತು. ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ ನಡೆಯಿತು.

    ಈ ಸಂದರ್ಭದಲ್ಲಿ ಕರಾವಳಿ ವಿದ್ಯಾವರ್ಧಕ ಸಂಘದಿಂದ ಸೂಲಿಬೆಲೆಯವರಿಗೆ ಸನ್ಮಾನಿಸಲಾಯಿತು. ಮಂಗಳವಾರ ಮುಂಜಾನೆ ಚಕ್ರವರ್ತಿ ಸೂಲಿಬೆಲೆಯವರ ನೇತ್ರತ್ವದಲ್ಲಿ ಯುವಾಬ್ರಿಗೇಡ್ ಹಾಗೂ ಸ್ಥಳೀಯರಿಂದ ದೇವಸ್ಥಾನದ ಸಮೀಪದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top